ಮಂಗಳೂರು :ಲಾಕ್ಡೌನ್ ಸಂದರ್ಭದಲ್ಲಿ ಕೋಕೋ ಹಾಗೂ ಅಡಿಕೆ ಖರೀದಿಗೆ ಕ್ಯಾಂಪ್ಕೊ ತಕ್ಷಣ ವ್ಯವಸ್ಥೆ ಮಾಡಿದ ಪರಿಣಾಮ ಬೆಳೆ ನಾಶ ತಪ್ಪಿದೆ. ಉತ್ಪನ್ನಗಳಿಗೆ ಉತ್ತಮ ಬೆಲೆ ಒದಗಿಸಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಎಸ್ ಆರ್ ಸತೀಶ್ಚಂದ್ರ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸಿಬ್ಬಂದಿ ಕೂಡಾ ಲಾಕ್ಡೌನ್ನಲ್ಲಿ ರೈತರಿಗೆ ಸೇವೆ ನೀಡಿದರು. ಕೋಕೋ ಹಣ್ಣಾಗುವ ಸಮಯದಲ್ಲೇ ಲಾಕ್ಡೌನ್ ಆರಂಭವಾಯಿತು ಎಂದರು.
ಹಾಗೆಯೇ ಕೋಕೋ ಒಣಗಿಸುವ ಕೇಂದ್ರಗಳಾದ ತಮಿಳುನಾಡಿನ ಧಾರಾಪುರಂ ಹಾಗೂ ತುಮಕೂರಿನ ಶಿರಾಗೆ ಕೋಕೋ ಕಳುಹಿಸಲು ಕಷ್ಟವಾಯಿತು. ಅದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿದ ಪರಿಣಾಮ ಯಾವುದೇ ತೊಂದರೆ ಉಂಟಾಗಲಿಲ್ಲ. ಅಲ್ಲದೆ ನಮ್ಮ ಸದಸ್ಯರಿಗೂ ತಂತ್ರಜ್ಞಾನದ ಮೂಲಕ ಕೋಕೋ ಒಣಗಿಸುವುದರ ಕುರಿತು ಜಾಲತಾಣಗಳ ಮೂಲಕ ಕಲಿಸಿದೆವು. ನಂತರ ಕೋಕೋ ಖರೀದಿಸುತ್ತೇವೆ ಎಂದು ರೈತರಿಗೆ ಧೈರ್ಯ ತುಂಬಿದೆವು ಎಂದರು.