ಕರ್ನಾಟಕ

karnataka

By

Published : Oct 29, 2019, 7:50 PM IST

Updated : Oct 29, 2019, 11:58 PM IST

ETV Bharat / city

ಎಂಆರ್​ಪಿಎಲ್​​​ ಉದ್ಯೋಗ ನೇಮಕಾತಿಯಲ್ಲಿ ಸ್ಥಳೀಯರ ಕಡೆಗಣನೆ ಆರೋಪ: ಪ್ರತಿಭಟನೆ

ದಕ್ಷಿಣ ಕನ್ನಡದಲ್ಲಿ ನೆಲೆಯೂರಿರುವ ಎಂಆರ್​​​ಪಿಎಲ್ ಸಂಸ್ಥೆ ಜಿಲ್ಲೆಯ ಯುವಕರಿಗೆ ಆದ್ಯತೆ ನೀಡುತ್ತಿಲ್ಲ ಎಂದು ಆರೋಪಿಸಿ ಡಿವೈಎಫ್ಐ ಪ್ರತಿಭಟನೆ ನಡೆಸಿತು.

ಎಂಆರ್​ಪಿಎಲ್​ ಉದ್ಯೋಗ ನೇಮಕಾತಿಯಲ್ಲಿ ಸ್ಥಳೀಯರಿಗೆ ಆಧ್ಯತೆ ನೀಡಬೇಕೆಂದು ಒತ್ತಾಯಿಸಿ ಪ್ರತಿಭಟನೆ

ಮಂಗಳೂರು:ಎಂಆರ್​ಪಿಎಲ್​ನಲ್ಲಿ ಉದ್ಯೋಗ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಅದರಲ್ಲಿ ಸ್ಥಳೀಯರಿಗೆ ಆದ್ಯತೆ ನೀಡದಿರುವುದನ್ನು ವಿರೋಧಿಸಿ ಎಂಆರ್​ಪಿಎಲ್ ಮುಖ್ಯ ದ್ವಾರದ ಎದುರು ಡಿವೈಎಫ್ಐ ಪ್ರತಿಭಟಿಸಿತು.

ಡಿವೈಎಫ್​ಐ ಪ್ರತಿಭಟನೆ

ಎಂಆರ್​ಪಿಎಲ್ ಇತ್ತೀಚೆಗೆ 233 ಹುದ್ದೆಗಳ ನೇಮಕಾತಿಗೆ ಪ್ರಕ್ರಿಯೆ ಆರಂಭಿಸಿದೆ. ದಕ್ಷಿಣ ಕನ್ನಡದಲ್ಲಿ ನೆಲೆಯೂರಿರುವ ಈ ಸಂಸ್ಥೆ ಜಿಲ್ಲೆಯ ಯುವಕರಿಗೆ ಆದ್ಯತೆ ನೀಡುತ್ತಿಲ್ಲ ಎಂದು ಆರೋಪಿಸಿ ಇಂದು ಪ್ರತಿಭಟನೆ ನಡೆಸಲಾಯಿತು. ಇನ್ನು ಎಂಆರ್​ಪಿಎಲ್ ಸಂಸ್ಥೆ ಸ್ಥಳೀಯರು ಮತ್ತು ಕನ್ನಡಿಗರನ್ನು ನೇಮಕಾತಿಯಲ್ಲಿ ಕಡೆಗಣಿಸಿರುವುದರಿಂದ ನೇಮಕಾತಿ ಪ್ರಕ್ರಿಯೆ ತಡೆ ಹಿಡಿಯಬೇಕೆಂದು ಇತ್ತೀಚೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗಭರಣ ನೋಟಿಸ್ ಕೂಡ ನೀಡಿದ್ದರು.

ಪ್ರತಿಭಟನೆ ವೇಳೆ ಮಾತನಾಡಿದ ಡಿವೈಎಫ್​ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಎಂಆರ್​ಪಿಎಲ್ ಆರಂಭದಲ್ಲಿ ಸ್ಥಳೀಯರಿಗೆ ಉದ್ಯೋಗದ ಭರವಸೆ ನೀಡಿ ಇದೀಗ ಮಾತು ತಪ್ಪಿದೆ. ನಮ್ಮ ನೆಲ-ಜಲ ಉಪಯೋಗಿಸುವ ಎಂಆರ್​ಪಿಎಲ್ ಸ್ಥಳೀಯರಿಗೆ ಉದ್ಯೋಗಾವಕಾಶ ನೀಡಬೇಕು. ಈಗಾಗಲೇ ನಡೆದಿರುವ ಉದ್ಯೋಗ ನೇಮಕಾತಿ ಪ್ರಕ್ರಿಯೆ ತಡೆಹಿಡಿದು, ಹೊಸ ಪ್ರಕಟಣೆ ನೀಡಬೇಕು ಎಂದು ಒತ್ತಾಯಿಸಿದರು.

Last Updated : Oct 29, 2019, 11:58 PM IST

ABOUT THE AUTHOR

...view details