ಕರ್ನಾಟಕ

karnataka

ETV Bharat / city

ಮಂಗಳೂರಿನಲ್ಲಿ ದುಷ್ಕರ್ಮಿಗಳಿಂದ ನಾಗವಿಗ್ರಹ ಧ್ವಂಸ : ಶಿವಲಿಂಗ ವಿಗ್ರಹ ಅಪಹರಣ - ನಾಗ ವಿಗ್ರಹ ಧ್ವಂಸಗೊಳಿಸಿದ ದುಷ್ಕರ್ಮಿಗಳು

ಕರ್ಕೇರ ಮೂಲಸ್ಥಾನದ ಗುರಿಕಾರರು ಸಂಕ್ರಮಣ ಪೂಜೆಗೆಂದು ನಾಗ ದೇವರ ಬನಕ್ಕೆ ಆಗಮಿಸಿದ ಸಂದರ್ಭ ಪ್ರಕರಣ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಆಗಮಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ..

Mangalore
ಮಂಗಳೂರಿನಲ್ಲಿ ನಾಗ ವಿಗ್ರಹ ಧ್ವಂಸಗೊಳಿಸಿದ ದುಷ್ಕರ್ಮಿಗಳು

By

Published : Oct 17, 2021, 7:56 PM IST

ಮಂಗಳೂರು :ನಗರದ ಬೈಕಂಪಾಡಿಯಲ್ಲಿರುವ ಕರ್ಕೇರ ಕುಟುಂಬಸ್ಥರ ಮೂಲ ಸ್ಥಾನದ ನಾಗ ಬನವನ್ನು ಹಾಳುಗೆಡವಿರುವ ದುಷ್ಕರ್ಮಿಗಳು‌ ನಾಗ ವಿಗ್ರಹವನ್ನು ಧ್ವಂಸಗೊಳಿಸಿದ್ದಾರೆ.

ನಾಗ ವಿಗ್ರಹ ಧ್ವಂಸ ; ಘಟನಾ ಸ್ಥಳಕ್ಕೆ ಆಗಮಿಸಿರುವ ಪೊಲೀಸರು

ಅಲ್ಲದೇ ಅಲ್ಲಿಯೇ ಇದ್ದ ಶಿವಲಿಂಗವೊಂದನ್ನು ಕದ್ದೊಯ್ದಿದ್ದಾರೆ. ಮೂಲಸ್ಥಾನದ ಕಾಣಿಕೆ ಹುಂಡಿ, ಕಚೇರಿಯಲ್ಲಿದ್ದ ಕಪಾಟು, ನಂದಿ ವಿಗ್ರಹವನ್ನೂ ಪುಡಿ ಮಾಡಿದ್ದಾರೆ ಎನ್ನಲಾಗ್ತಿದೆ. ಘಟನೆ ಯಾವಾಗ ನಡೆದಿದೆ ಎಂದು ಇನ್ನೂ ತಿಳಿದು ಬಂದಿಲ್ಲ.

ಇಂದು ಬೆಳಗ್ಗೆ ಕರ್ಕೇರ ಮೂಲಸ್ಥಾನದ ಗುರಿಕಾರರು ಸಂಕ್ರಮಣ ಪೂಜೆಗೆಂದು ನಾಗ ದೇವರ ಬನಕ್ಕೆ ಆಗಮಿಸಿದ ಸಂದರ್ಭ ಪ್ರಕರಣ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಆಗಮಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಭೂ ಕುಸಿತದಲ್ಲಿ ಸಿಲುಕಿದ್ದ ಕುಟುಂಬವನ್ನು ರಕ್ಷಿಸಿದ ಕೆಎಸ್​ಆರ್​ಟಿಸಿ ಸಿಬ್ಬಂದಿ

ABOUT THE AUTHOR

...view details