ಕರ್ನಾಟಕ

karnataka

ETV Bharat / city

ಸೋಂಕಿತ ವ್ಯಕ್ತಿಯ ಅಂತ್ಯ ಸಂಸ್ಕಾರ ನೆರವೇರಿಸಿದ ಕೊರೊನಾ ವಾರಿಯರ್ಸ್​ ತಂಡ - ಬೆಳ್ತಂಗಡಿ ತಾಲೂಕಿನ ಹೊಸಂಗಡಿ

ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯ ಸಂಸ್ಕಾರವನ್ನು ನಿಯಮಾನುಸಾರ ಮಾಡಿ ಬೆಳ್ತಂಗಡಿ ಕೊರೊನಾ ವಾರಿಯರ್ಸ್​ ತಂಡ ಮಾನವೀಯತೆ ಮೆರೆದಿದೆ.

Corona death
Corona death

By

Published : Sep 17, 2020, 10:29 AM IST

Updated : Sep 17, 2020, 10:51 AM IST

ಬೆಳ್ತಂಗಡಿ: ತಾಲೂಕಿನ ಹೊಸಂಗಡಿ ಸಮೀಪದ ವ್ಯಕ್ತಿಯೊಬ್ಬರು ಕೋವಿಡ್​​​ನಿಂದ ಮೃತಪಟ್ಟಿದ್ದು, ಅವರ ಅಂತ್ಯ ಸಂಸ್ಕಾರವನ್ನು ಹಿಂದೂ ಸಂಪ್ರದಾಯದಂತೆ ಗೌರವಯುತವಾಗಿ ಬೆಳ್ತಂಗಡಿ ಕೊರೊನಾ ವಾರಿಯರ್ಸ್​ ತಂಡ ನೆರವೇರಿಸಿದೆ.

ಅಂತ್ಯ ಸಂಸ್ಕಾರ

ಆರೋಗ್ಯ ಮತ್ತು ಕಂದಾಯ ಇಲಾಖೆಯ ನಿರ್ದೇಶನದಂತೆ ಮೃತರ ಮನೆಯವರ ಒಪ್ಪಿಗೆ ಪಡೆದು ಮಾನವ ಸ್ಪಂದನ ಕೊರೊನಾ ವಾರಿಯರ್ಸ್​ ತಂಡ ಕೋವಿಡ್ ನಿಯಮಾನುಸಾರ ಪಿಪಿಇ ಕಿಟ್ ಮತ್ತು ಇನ್ನಿತರೆ ರಕ್ಷಣಾತ್ಮಕ ಕ್ರಮದೊಂದಿಗೆ ಅಂತ್ಯಕ್ರಿಯೆ ನಡೆಯಿತು. ಗುರುವಾಯನಕೆರೆ ಸಾಯಿರಾಂ ಗ್ರೂಪ್​ನ ಶಶಿರಾಜ್ ಶೆಟ್ಟಿ, ರಂಜಿತ್ ಗುರುವಾಯನಕೆರೆ, ಮೃತರ ಇಬ್ಬರು ಮಕ್ಕಳ ಸಹಕಾರದೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾನವ ಸ್ಪಂದನ ತಂಡದ‌ ಪಿ.ಸಿ‌.ಸೆಬಾಸ್ಟಿಯನ್ ಹಾಗೂ ಅಶ್ರಫ್ ಆಲಿಕುಂಞಿ ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು.

Last Updated : Sep 17, 2020, 10:51 AM IST

ABOUT THE AUTHOR

...view details