ಕರ್ನಾಟಕ

karnataka

By

Published : Aug 18, 2020, 2:10 AM IST

ETV Bharat / city

ಮಂಗಳೂರು ಎಂಆರ್​​ಪಿಎಲ್​ನಲ್ಲಿ ಸಂವಿಧಾನ ಶಿಲ್ಪಿಯ ಪ್ರತಿಮೆ ಅನಾವರಣ

ಎಂಆರ್​​ಪಿ​ಎಲ್ ವ್ಯವಸ್ಥಾಪಕ ನಿರ್ದೇಶಕ ಎಂ.ವೆಂಕಟೇಶ್ ಅವರು ಆ.15ರಂದು ಅಂಬೇಡ್ಕರ್ ಪ್ರತಿಮೆಯನ್ನು ಅನಾವರಣಗೊಳಿಸಿದರು. ಈ ಸಂದರ್ಭ ಅಂಬೇಡ್ಕರ್ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಲಾಯಿತು.

ಮಂಗಳೂರು ಎಂಆರ್​​ಪಿಎಲ್​ನಲ್ಲಿ ಸಂವಿಧಾನ ಶಿಲ್ಪಿಯ ಪ್ರತಿಮೆ ಅನಾವರಣ
ಮಂಗಳೂರು ಎಂಆರ್​​ಪಿಎಲ್​ನಲ್ಲಿ ಸಂವಿಧಾನ ಶಿಲ್ಪಿಯ ಪ್ರತಿಮೆ ಅನಾವರಣ

ಮಂಗಳೂರು: ನಗರದ ಎಂಆರ್​​ಪಿಎಲ್​ನಲ್ಲಿ ಸಂವಿಧಾನದ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಅನಾವರಣಗೊಳಿಸಲಾಗಿದೆ.

ಎಂಆರ್​​ಪಿ​ಎಲ್ ವ್ಯವಸ್ಥಾಪಕ ನಿರ್ದೇಶಕ ಎಂ.ವೆಂಕಟೇಶ್ ಅವರು ಆ.15ರಂದು ಅಂಬೇಡ್ಕರ್ ಪ್ರತಿಮೆಯನ್ನು ಅನಾವರಣಗೊಳಿಸಿದರು. ಈ ಸಂದರ್ಭ ಅಂಬೇಡ್ಕರ್ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಲಾಯಿತು.

ಈ ಸಂದರ್ಭ ಎಂ.ವೆಂಕಟೇಶ್ ಅವರು ಮಾತನಾಡಿ, ಅಂಬೇಡ್ಕರ್ ಅವರ ರಾಜಕೀಯ ದೂರದೃಷ್ಟಿ, ಆರಂಭಿಕ ಹೋರಾಟ ಹಾಗೂ ಶಿಕ್ಷಣ ನೀತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಎಂಆರ್​ಪಿಎಲ್ ಅಧಿಕಾರಿಗಳಾದ ರಾಜೀವ್ ಕುಶ್ವ, ಎಲಾಂಗೊ ಎಂ, ಬಿಹೆಚ್ ವಿ ಪ್ರಸಾದ್, ಎಂ.ಎಸ್.ಲತಾ ಕುಮಾರಿ, ಬಿ.ರಮೇಶ್ ಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.

ABOUT THE AUTHOR

...view details