ಕರ್ನಾಟಕ

karnataka

ETV Bharat / city

ಕುಡಿದ ಮತ್ತಲ್ಲಿ ಯುವಕನ ಕೊಲೆ.. ಮೂವರ ಬಂಧನ - A young man murdered in manglore

ಮಂಗಳೂರಿನ ಸುರತ್ಕಲ್​ನಲ್ಲಿರುವ ಬಾರ್​ನಲ್ಲಿ ಕುಡಿದ ಮತ್ತಿನಲ್ಲಿ ನಡೆದ ಗಲಾಟೆಯಲ್ಲಿ ಒಬ್ಬನ ಹತ್ಯೆಯಾಗಿದ್ದು ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ.

A young man murdered in manglore
ಕುಡಿದ ಮತ್ತಿನಲ್ಲಿ ಯುವಕನ ಕೊಲೆ..ಮೂವರ ಬಂಧನ

By

Published : Nov 30, 2019, 11:52 AM IST


ಮಂಗಳೂರು:ಮಂಗಳೂರಿನ ಸುರತ್ಕಲ್​ನಲ್ಲಿರುವ ಬಾರ್​ನಲ್ಲಿ ಕುಡಿದ ಮತ್ತಿನಲ್ಲಿ ನಡೆದ ಗಲಾಟೆಯಲ್ಲಿ ಒಬ್ಬನ ಹತ್ಯೆಯಾಗಿದ್ದು,ಮೂವರನ್ನು ಬಂಧಿಸಲಾಗಿದೆ.

ಮಂಗಳೂರಿನ ಗುಡ್ಡೆಕೊಪ್ಲ ನಿವಾಸಿ ಸಂದೇಶ್ (30) ಹತ್ಯೆಯಾದ ಯುವಕ. ಸುರತ್ಕಲ್ ಜಂಕ್ಷನ್​ನಲ್ಲಿರುವ ಬಾರ್​ನಲ್ಲಿ ಸಂದೇಶ್ ಕುಡಿಯುತ್ತಿದ್ದಾಗ ರಾಜ,ಗಣೇಶ್,ಸುಹೈಲ್ ಕೂಡ ಅಲ್ಲಿಗೆ ಬಂದಿದ್ದರು. ಈ ವೇಳೆ ಅವರ ನಡುವೆ ಗಲಾಟೆ ಆಗಿತ್ತು. ಬಳಿಕ ಮೂವರು ಸೇರಿ ಸಂದೇಶ್​ಗೆ ಇರಿದು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ದೂರು ಸ್ವೀಕರಿಸಿದ ಪೊಲೀಸರು ಸದ್ಯ, ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ.

ABOUT THE AUTHOR

...view details