ಕರ್ನಾಟಕ

karnataka

ETV Bharat / city

ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿ ಬಗ್ಗೆ ಸುರೇಶ್​ ಅಂಗಡಿ ಜತೆ ಚರ್ಚಿಸಿದ ಜಾಧವ್​​​​ - ಸಂಸದ ಉಮೇಶ್ ಜಾಧವ್

ರೈಲ್ವೆ ವಿಭಾಗೀಯ ಕಚೇರಿ ಶೀಘ್ರ ಪ್ರಾರಂಭಿಸುವ ಕುರಿತಂತೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಜೊತೆ ಚರ್ಚೆ ನಡೆಸಿರುವುದಾಗಿ ಸಂಸದ ಉಮೇಶ್ ಜಾಧವ್ ಹೇಳಿದ್ದಾರೆ.

Kn_klb_01_jadhav_tweet_ka10021
ರೈಲ್ವೆ ವಿಭಾಗೀಯ ಕಚೇರಿಯನ್ನು ಶೀಘ್ರ ಪ್ರಾರಂಭಿಸಿ, ಕೇಂದ್ರ ರೈಲ್ವೆ ಸಚಿವರಿಗೆ ಉಮೇಶ್ ಜಾಧವ್ ಮನವಿ

By

Published : Jan 23, 2020, 12:17 PM IST

ಕಲಬುರಗಿ:‌ ರೈಲ್ವೆ ವಿಭಾಗೀಯ ಕಚೇರಿ ಶೀಘ್ರ ಪ್ರಾರಂಭಿಸುವ ಕುರಿತಂತೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಜೊತೆ ಚರ್ಚೆ ನಡೆಸಿರುವುದಾಗಿ ಸಂಸದ ಉಮೇಶ್ ಜಾಧವ್ ಹೇಳಿದ್ದಾರೆ.

ದೆಹಲಿಯ ಸಚಿವರ ಕಚೇರಿಗೆ ಭೇಟಿ ನೀಡಿದ ಪೋಟೋವನ್ನು ಟ್ವಿಟರ್​ನಲ್ಲಿ ಪೋಸ್ಟ್ ಮಾಡಿರುವ ಅವರು, ಕಲಬುರಗಿ ವಿಭಾಗೀಯ ಕಚೇರಿ ಸ್ಥಾಪನೆಗೆ ಈಗಾಗಲೇ ಅನುಮತಿ ದೊರೆತ್ತಿದ್ದು, ಕೊಡಲೇ ಆರಂಭಿಸುವ ಕುರಿತು ಸಚಿವ ಸುರೇಶ್​ ಅಂಗಡಿ ಜೊತೆ ಚರ್ಚೆ ನಡೆಸಿರುವುದಾಗಿ ಬರೆದುಕೊಂಡಿದ್ದಾರೆ. ಈ ವೇಳೆ ಮುಂದಿನ ಬಜೆಟ್​​ನಲ್ಲಿ ಕಲಬುರಗಿಗೆ ಪ್ರಮುಖ ಯೋಜನೆಗಳನ್ನು ಘೋಷಿಸುವುದಾಗಿ ಸುರೇಶ್ ಅಂಗಡಿ ಭರವಸೆ ನೀಡಿದ್ದಾರೆ ಎಂದು ಜಾಧವ್ ಬರೆದುಕೊಂಡಿದ್ದಾರೆ.

ABOUT THE AUTHOR

...view details