ಕಲಬುರಗಿ:ದಾಲ್ ಮಿಲ್ಗಳನ್ನು ಆಗ್ರೋ ಇಂಡಸ್ಟ್ರಿ ಎಂದು ಪರಿಗಣಿಸುವಂತೆ ಸಂಸದ ಉಮೇಶ್ ಜಾಧವ್ ಅವರು ಕೇಂದ್ರ ಭೂಸಾರಿಗೆ ಮತ್ತು ಭಾರಿ ಕೈಗಾರಿಕೆ ,ಸಾರ್ವಜನಿಕ ಉದ್ದಿಮೆ ಸಚಿವಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಬೇಳೆ ಮಿಲ್ಗಳನ್ನು ಆಗ್ರೋ ಇಂಡಸ್ಟ್ರಿ ಎಂದು ಪರಿಗಣಿಸಿ: ಕೇಂದ್ರ ಸಚಿವರಿಗೆ ಉಮೇಶ್ ಜಾಧವ್ ಮನವಿ
ದಾಲ್ ಮಿಲ್ಗಳನ್ನು ಆಗ್ರೋ ಇಂಡಸ್ಟ್ರಿ ಎಂದು ಪರಿಗಣಿಸುವಂತೆ ಸಂಸದ ಉಮೇಶ್ ಜಾಧವ್ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
ಕಲಬುರಗಿ ತೊಗರಿ ಕಣಜದ ನಾಡು ಎಂದೇ ಪ್ರಸಿದ್ಧಿ ಹೊಂದಿದೆ. ಕಲ್ಯಾಣ ಕರ್ನಾಟಕ ಭಾಗದ ರೈತರು ಕೃಷಿಯಲ್ಲಿ ತೂಗರಿ ಬೆಳೆಯನ್ನೇ ಹೆಚ್ಚಾಗಿ ಬೆಳೆಯುತ್ತಾರೆ. ಆದ್ದರಿಂದ ದಾಲ್ ಮಿಲ್ಗಳನ್ನು ಆಗ್ರೋ ಇಂಡಸ್ಟ್ರಿ ಎಂದು ಪರಿಗಣಿಸಿದರೆ ಈ ಭಾಗದ (ಕಲ್ಯಾಣ ಕರ್ನಾಟಕ) ಉದ್ದಿಮೆದಾರರಿಗೆ ಹಾಗೂ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಮನವಿ ಮೂಲಕ ಒತ್ತಾಯಿಸಿದ್ದಾರೆ.
ಮಾರುಕಟ್ಟೆಯಲ್ಲಿನ ನಿಯಮಗಳ ಬದಲಾವಣೆಯಿಂದ ದಾಲ್ಮಿಲ್ಗಳು ನಷ್ಟಕ್ಕೆ ಸಿಲುಕಿವೆ. ಈಗಾಗಲೇ ಅನೇಕ ದಾಲ್ಮಿಲ್ಗಳು ಮುಚ್ಚಿವೆ. ರೈತರು ಹಾಗೂ ವ್ಯಾಪಾರಿಗಳು ನಷ್ಟದಲ್ಲಿದ್ದಾರೆ. ಅದಕ್ಕಾಗಿ ದಾಲ್ಮಿಲ್ಗಳನ್ನು (agro base) ಇಂಡಸ್ಟ್ರಿ ಎಂದು ಗುರುತಿಸಿ ಅದಕ್ಕೆ ತಕ್ಕ ಸಾಲ (ಬಡ್ಡಿ ರಹಿತ) ಕೊಡಬೇಕಾಗಿ ಎಂದು ಸಚಿವರಿಗೆ ತಿಳಿಸಿರುವುದಾಗಿ ಜಾಧವ್ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.