ಕರ್ನಾಟಕ

karnataka

ಕಲಬುರಗಿ ಲಾಕ್​ಡೌನ್​​ ರೂಲ್ಸ್​​ ಬ್ರೇಕ್​ : ಫೀಲ್ಡಿಗಿಳಿದು ಜನರಿಗೆ ಶಾಕ್​​ ಕೊಟ್ಟ ನೂತನ ಪೊಲೀಸ್​ ಆಯುಕ್ತರು

By

Published : May 23, 2021, 7:18 PM IST

ನಗರದ ಹಲವೆಡೆ ಸಂಚರಿಸಿ ವಾಹನ್ ಸೀಜ್ ಮಾಡಿದ ಕಮಿಷನರ್, ವಾಹನ ಸವಾರರನ್ನು ತಡೆದು ವಿಚಾರಣೆ ನಡೆಸಿದರು. ಅಲ್ಲದೆ ಹಲವು ವಾಹನಗಳನ್ನ ಸೀಜ್ ಮಾಡಿದರು. ಜೊತೆಗೆ ಮತ್ತೊಮ್ಮೆ ರಸ್ತೆ ಮೇಲೆ ಕಾಣದಂತೆ ಜನರಿಗೆ ಎಚ್ಚರಿಕೆ ನೀಡಿದರು..

Police Commissioner YS Ravikumar on filed to control crowd
ಪೊಲೀಸ್ ಕಮೀಷನರ್ ವೈಎಸ್ ರವಿಕುಮಾರ್

ಕಲಬುರಗಿ :ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಕಲಬುರಗಿ‌ ನಗರದ ನೂತನ‌ ಪೊಲೀಸ್ ಕಮಿಷನರ್ ವೈ.ಎಸ್. ರವಿಕುಮಾರ್ ಅವರು ಫೀಲ್ಡ್‌ಗಿಳಿದು ಸುಖಾಸುಮ್ಮನೆ ರಸ್ತೆಮೇಲೆ ಓಡಾಡುವ ವಾಹನ ಸವಾರರಿಗೆ ಬಿಸಿ ಮುಟ್ಟಿಸಿದರು.

ಫೀಲ್ಡಿಗಿಳಿದು ಜನರಿಗೆ ಶಾಕ್​​ ಕೊಟ್ಟ ನೂತನ ಪೊಲೀಸ್​ ಆಯುಕ್ತರು..

ನಗರದಲ್ಲಿ ಸೆಮಿ ಲಾಕ್​ಡೌನ್​​​ ಜಾರಿ ಇದ್ದರೂ ಸಹ ಕೆಲವರು 10 ಗಂಟೆಯ‌ ನಂತರವೂ ಅನಗತ್ಯ ಓಡಾಡುತ್ತಿರುವುದು ಕಂಡು ಬಂತು.

ಹೀಗಾಗಿ, ಸ್ವತಃ ರಸ್ತೆಗಿಳಿದ ಪೊಲೀಸ್ ಆಯುಕ್ತರು ಬೈಕ್ ಹಾಗೂ ಕಾರ್‌ಗಳು ಸೀಜ್ ಮಾಡುವ ಮೂಲಕ ವಾಹನ ಸವಾರರಿಗೆ ಶಾಕ್​ ನೀಡಿದರು.

ನಗರದ ಹಲವೆಡೆ ಸಂಚರಿಸಿ ವಾಹನ್ ಸೀಜ್ ಮಾಡಿದ ಕಮಿಷನರ್, ವಾಹನ ಸವಾರರನ್ನು ತಡೆದು ವಿಚಾರಣೆ ನಡೆಸಿದರು. ಅಲ್ಲದೆ ಹಲವು ವಾಹನಗಳನ್ನ ಸೀಜ್ ಮಾಡಿದರು. ಜೊತೆಗೆ ಮತ್ತೊಮ್ಮೆ ರಸ್ತೆ ಮೇಲೆ ಕಾಣದಂತೆ ಜನರಿಗೆ ಎಚ್ಚರಿಕೆ ನೀಡಿದರು.

ABOUT THE AUTHOR

...view details