ಕಲಬುರಗಿ:ಸಂಸದ ಡಾ.ಉಮೇಶ್ ಜಾಧವ್ಗೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.
ಸಂಸದ ಡಾ.ಉಮೇಶ್ ಜಾಧವ್ಗೆ ಎದೆ ನೋವು; ಖಾಸಗಿ ಆಸ್ಪತ್ರೆಗೆ ದಾಖಲು - MP Umesh Jadhav news
ಇತ್ತೀಚೆಗೆ ಕೊರೊನಾದಿಂದ ಗುಣಮುಖರಾಗಿ ಬಂದಿದ್ದ ಸಂಸದ ಜಾಧವ್ಗೆ, ಸಣ್ಣ ಪ್ರಮಾಣದ ಎದೆನೋವು ಕಾಣಿಸಿಕೊಂಡಿದೆ. ಆರೋಗ್ಯದಲ್ಲಿ ಏರುಪೇರು ಆಗಿರುವ ಕಾರಣ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.
![ಸಂಸದ ಡಾ.ಉಮೇಶ್ ಜಾಧವ್ಗೆ ಎದೆ ನೋವು; ಖಾಸಗಿ ಆಸ್ಪತ್ರೆಗೆ ದಾಖಲು MP Umesh Jadhav](https://etvbharatimages.akamaized.net/etvbharat/prod-images/768-512-8970588-thumbnail-3x2-jayddjpg.jpg)
ಡಾ.ಉಮೇಶ್ ಜಾಧವ್
ಇತ್ತೀಚೆಗೆ ಕೊರೊನಾದಿಂದ ಗುಣಮುಖರಾಗಿ ಬಂದಿದ್ದಕಲಬುರಗಿಸಂಸದ ಜಾಧವ್ಗೆ, ಸಣ್ಣ ಪ್ರಮಾಣದ ಎದೆನೋವು ಕಾಣಿಸಿಕೊಂಡಿದೆ. ಆರೋಗ್ಯದಲ್ಲಿ ಏರುಪೇರು ಆಗಿರುವ ಕಾರಣ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಜಯದೇವ ಆಸ್ಪತ್ರೆಯ ಮುಖ್ಯಸ್ಥ ಡಾ. ಮಂಜುನಾಥ್ ನಿರ್ದೇಶನದಂತೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕುರಿತು ಟ್ವಿಟ್ ಮಾಡಿದ ಸಂಸದ ಜಾಧವ್, ಶೀಘ್ರವೇ ಗುಣಮುಖನಾಗಿ ಹಿಂದಿರುಗಲಿದ್ದೇನೆ. ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಆತಂಕ ಪಡಬಾರದು ಎಂದು ಮನವಿ ಮಾಡಿದ್ದಾರೆ.