ಕರ್ನಾಟಕ

karnataka

ಪಿಎಸ್ಐ ಮರು ಪರೀಕ್ಷೆ ಹೆಸರಲ್ಲಿ ಅಕ್ರಮ‌ ಮುಚ್ಚಿ ಹಾಕುವ ಪ್ರಯತ್ನ ಆಗದಿರಲಿ : ಮಲ್ಲಿಕಾರ್ಜುನ ಖರ್ಗೆ

ಪೊಲೀಸ್​ ತರಬೇತಿ ಕೇಂದ್ರಗಳಿದ್ದರೂ ಖಾಸಗಿ ಶಾಲೆಗಳಲ್ಲಿ ಪರೀಕ್ಷೆ ನಡೆಸುವುದು ಯಾಕೆ?. ಕೋಟಿ ಕೋಟಿ ಖರ್ಚು ಮಾಡಿ ಕಟ್ಟಿರುವ ಸರ್ಕಾರಿ ಕಟ್ಟಡಗಳನ್ನೇ ಪರೀಕ್ಷೆಗೆ ಬಳಸಬಹುದಲ್ಲವೇ ಎಂದು ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು..

By

Published : Apr 29, 2022, 3:20 PM IST

Published : Apr 29, 2022, 3:20 PM IST

Do not make an illegal cover-up in the name of PSI re-examination Mallikarjun Kharge
ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಿದ್ದು, ಮರು ಪರೀಕ್ಷೆ ನಡಿಸೋದು ಬಿಡೋದು ಸರ್ಕಾರಕ್ಕೆ ಬಿಟ್ಟ ವಿಷಯ. ಮೊದಲು ತನಿಖೆಯಾಗಿ ಅಕ್ರಮವೆಸಗಿದವರಿಗೆ ಶಿಕ್ಷೆ ಆಗಲಿ. ಮರು ಪರೀಕ್ಷೆಯ ಮೂಲಕ ಅಕ್ರಮ ಮುಚ್ಚಿ ಹಾಕುವ ಪ್ರಯತ್ನ ಆಗಬಾರದು.

ಅಕ್ರಮ ಯಾಕೆ ನಡೆಯಿತು? ಭಾಗಿಯಾದವರು ಯಾರು? ನಿಷ್ಪಕ್ಷಪಾತ ತನಿಖೆ ಆಗಲಿ, ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ ಎಂದು ಒತ್ತಾಯಿಸಿದರು. ಸರ್ಕಾರಿ ಪೊಲೀಸ್ ತರಬೇತಿ ಕೇಂದ್ರ ಇದ್ದರೂ ಖಾಸಗಿ ಕೇಂದ್ರಗಳಲ್ಲಿ ಪರೀಕ್ಷೆ ನಡಿಸೋ ಅಗತ್ಯ ಏನಿದೆ ಅಂತಾ ಪ್ರಶ್ನಿಸಿದ ಖರ್ಗೆ, ಮರು ಪರೀಕ್ಷೆ ನಡೆಸುತ್ತೀರೋ, ತನಿಖೆ ಮಾಡಿ ಸರಿಪಡಿಸುತ್ತೀರೋ, ಹೈಕೋರ್ಟ್ ಜಡ್ಜ್ ಮೂಲಕ ತನಿಖೆ ಮಾಡುತ್ತೀರೋ ಇದು ಸರ್ಕಾರಕ್ಕೆ ಬಿಟ್ಟ ವಿಚಾರ ಎಂದರು.

ಪಿಎಸ್ಐ ಮರು ಪರೀಕ್ಷೆ ಹೆಸರಲ್ಲಿ ಅಕ್ರಮ‌ ಮುಚ್ಚಿ ಹಾಕುವ ಪ್ರಯತ್ನ ಆಗದಿರಲಿ.. ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ..

ಅಕ್ರಮ ಹೇಗೆ ಆಯ್ತು ಎಂಬುದರ ಬಗ್ಗೆ ಸಂಪೂರ್ಣ ತನಿಖೆ ಆಗಬೇಕಿದೆ. ತಪ್ಪಿತಸ್ಥರು ಯಾರು ಎಂಬುದು ಹೊರಬರಬೇಕಿದೆ. ಮೊದಲು ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ. ತಪ್ಪಿತಸ್ಥರಿಗೆ ಶಿಕ್ಷೆ ಆದರೆ ಮುಂದೆ ಈ ರೀತಿ ಅಕ್ರಮ ಆಗುವುದನ್ನು ನಿಲ್ಲಿಸಬಹುದು ಎಂದರು.

ಇದನ್ನೂ ಓದಿ:ಯಾರೋ ಕಿಟ್ ಕೊಟ್ರೆ, ನಾನು ಅದಕ್ಕೆ ರಿಯಾಕ್ಟ್ ಮಾಡಬೇಕಾ ಎಂದ ಸಿದ್ದರಾಮಯ್ಯ!

ABOUT THE AUTHOR

...view details