ಕರ್ನಾಟಕ

karnataka

ಎನ್​ಕೌಂಟರ್​ನಿಂದ ಅತ್ಯಾಚಾರ ಪ್ರಕರಣ ತಡೆಯೋಕಾಗಲ್ಲ:​ ಕೆ. ನೀಲಾ

By

Published : Dec 6, 2019, 7:52 PM IST

ಹೈದರಾಬಾದ್ ನ ಪಶು ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಎನ್​ಕೌಂಟರ್ ಮಾಡಿರುವುದನ್ನು ಜನವಾದಿ ಮಹಿಳಾ ಸಂಘಟನೆ ಉಪಾಧ್ಯಕ್ಷೆ ಕೆ.ನೀಲಾ ಖಂಡಿಸಿದ್ದಾರೆ.

Kn_klb_02_k_neela_byte_ka10021
ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ ಸರ್ವಾಧಿಕಾರ ಅಲ್ಲ: ಕೆ.ನೀಲಾ

ಕಲಬುರಗಿ:ಹೈದರಾಬಾದ್ ನ ಪಶು ವೈದ್ಯೆ ಮೇಲಿನ ಅತ್ಯಾಚಾರ ಆರೋಪಿಗಳನ್ನು ಪೊಲೀಸರು ಎನ್​ಕೌಂಟರ್ ಮಾಡಿರುವುದನ್ನು ಜನವಾದಿ ಮಹಿಳಾ ಸಂಘಟನೆ ಉಪಾಧ್ಯಕ್ಷೆ ಕೆ.ನೀಲಾ ಖಂಡಿಸಿದ್ದಾರೆ.

ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ ಸರ್ವಾಧಿಕಾರ ಅಲ್ಲ: ಕೆ.ನೀಲಾ
ಈಟಿವಿ ಭಾರತನೊಂದಿಗೆ ಮಾತನಾಡಿರುವ ಅವರು, ಅತ್ಯಾಚಾರಿಗಳ ಎನ್​ಕೌಂಟರ್ ಪ್ರಕರಣದಲ್ಲಿ ಹೈದರಾಬಾದ್ ಪೊಲೀಸರು ಭ್ರಮೆ ಹುಟ್ಟಿಸುವಂತಹ ಕೆಲಸ ಮಾಡುತ್ತಿದ್ದಾರೆ. ಎನ್​ಕೌಂಟರ್ ಮಾಡಿರೋದು ಅತ್ಯಾಚಾರಕ್ಕಾಗಿ ಅಲ್ಲ, ಆತ್ಮರಕ್ಷಣೆಗಾಗಿ ಅಂತಾ ಹೇಳ್ತಿದಾರೆ. ಆದ್ರೆ ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆಯೇ ಹೊರತು ಸರ್ವಾಧಿಕಾರಿ ನೀತಿ ಇಲ್ಲ. ಈ ರೀತಿ ಮಾಡುವುದರಿಂದ ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯವಿಲ್ಲ ಎಂದರು.

ಇನ್ನು, ದೇಶದಲ್ಲಿ ನಡೆದಿರುವ ಬೇರೆ ಅತ್ಯಾಚಾರ ಪ್ರಕರಣಗಳಲ್ಲಿಯೂ ಪೊಲೀಸರು ಇದೇ ರೀತಿ ಎನ್​ಕೌಂಟರ್ ಮಾಡುತ್ತಾರೆಯೇ ಎಂದು ನೀಲಾ ಪ್ರಶ್ನಿಸಿದರು.

ಎನ್ ಕೌಂಟರ್ ಮೂಲಕ ಅತ್ಯಾಚಾರ ನಿಲ್ಲಿಸುವ ಭ್ರಮೆ ಸೃಷ್ಟಿಸಬೇಡಿ. ದೇಶದಲ್ಲಿ ತ್ವರಿತ ಗತಿಯ ಕಾನೂನು ಜಾರಿಯಾಗಲಿ ಎಂದು ಅವರು ಆಗ್ರಹಿಸಿದರು.

ABOUT THE AUTHOR

...view details