ಕರ್ನಾಟಕ

karnataka

ETV Bharat / city

ರೈತ ಹೋರಾಟಗಾರರ ಕೊಲೆ ಸಂಚಿನ ಹಿಂದೆ ಕೇಂದ್ರದ ಕೈವಾಡ: ಮಾಜಿ ಶಾಸಕ ಪಾಟೀಲ - ದೆಹಲಿ ಪೊಲೀಸರು ಕೇಂದ್ರ ಗೃಹ ಸಚಿವರ ವ್ಯಾಪ್ತಿ

ದೆಹಲಿ ಪೊಲೀಸರು ಕೇಂದ್ರ ಗೃಹ ಸಚಿವರ ವ್ಯಾಪ್ತಿಗೆ ಬರುತ್ತಾರೆ. ಹೀಗಾಗಿ ಕೊಲೆ ಸಂಚಿನ ಹಿಂದೆ ಕೇಂದ್ರ ಸರ್ಕಾರದ ಸಂಚಿರೋದು ಸ್ಪಷ್ಟವಾಗಿದೆ. ಪ್ರಕರಣದ ನ್ಯಾಯಾಂಗ ತನಿಖೆ ನಡೆಸಿ, ಸಂಚುಗಾರರನ್ನು ಬಯಲಿಗೆಳೆದು ಕಠಿಣ ಶಿಕ್ಷೆ ವಿಧಿಸಬೇಕು ಎಂದು ಪಾಟೀಲ ಒತ್ತಾಯಿಸಿದ್ದಾರೆ.

former minister br patil talk
ಮಾಜಿ ಶಾಸಕ ಪಾಟೀಲ

By

Published : Jan 24, 2021, 5:20 PM IST

ಕಲಬುರಗಿ: ಜನತಾ ಪರೇಡ್ ಹೋರಾಟದ ಸಂದರ್ಭದಲ್ಲಿ ರೈತ ಹೋರಾಟಗಾರರ ಕೊಲೆಯ ಸಂಚಿನ ಹಿಂದೆ ಕೇಂದ್ರ ಸರ್ಕಾರದ ಕೈವಾಡವಿದ್ದು, ನ್ಯಾಯಾಂಗ ತನಿಖೆ ನಡೆಸುವಂತೆ ಮಾಜಿ ಶಾಸಕ ಬಿ.ಆರ್. ಪಾಟೀಲ ಆಗ್ರಹಿಸಿದ್ದಾರೆ.

ಮಾಜಿ ಶಾಸಕ ಪಾಟೀಲ

ಓದಿ: ನಾಲ್ವರು ರೈತನಾಯಕರ ಹತ್ಯೆಗೆ ಸಂಚು: ಮುಸುಕುಧಾರಿಯಿಂದ ಆಘಾತಕಾರಿ ಮಾಹಿತಿ ಬಹಿರಂಗ

ಕಲಬುರಗಿಯಲ್ಲಿ ಮಾತನಾಡಿದ ಅವರು, ಕೊಲೆ ಸಂಚಿನ ಹಿಂದೆ ದೆಹಲಿ ಪೊಲೀಸರ ಕೈವಾಡವಿರೋದಾಗಿ ಸಂಚು ನಡೆಸಿದವರೇ ಹೇಳಿದ್ದಾರೆ. ದೆಹಲಿ ಪೊಲೀಸರು ಕೇಂದ್ರ ಗೃಹ ಸಚಿವರ ವ್ಯಾಪ್ತಿಗೆ ಬರುತ್ತಾರೆ. ಹೀಗಾಗಿ ಕೊಲೆ ಸಂಚಿನ ಹಿಂದೆ ಕೇಂದ್ರ ಸರ್ಕಾರದ ಸಂಚಿರೋದು ಸ್ಪಷ್ಟವಾಗಿದೆ. ಪ್ರಕರಣದ ನ್ಯಾಯಾಂಗ ತನಿಖೆ ನಡೆಸಿ, ಸಂಚುಗಾರರನ್ನು ಬಯಲಿಗೆಳೆದು ಕಠಿಣ ಶಿಕ್ಷೆ ವಿಧಿಸಬೇಕು ಎಂದು ಪಾಟೀಲ ಒತ್ತಾಯಿಸಿದ್ದಾರೆ.

ಹಂಪಾ ನಾಗರಾಜಯ್ಯ ವಿಚಾರಣೆ ‌ಪ್ರಜಾಪ್ರಭುತ್ವಕ್ಕೆ ಮಾಡಿದ ದೊಡ್ಡ ಅಪಮಾನ:

ಹಂಪ ನಾಗರಾಜಯ್ಯ ಅವರನ್ನು ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದು ಸಾಹಿತ್ಯ ಲೋಕಕ್ಕೆ, ಪ್ರಜಾಪ್ರಭುತ್ವಕ್ಕೆ ಮಾಡಿದ ದೊಡ್ಡ ಅಪಮಾನ. ಇದು ರಾಜ್ಯ ಸರ್ಕಾರದ ಸರ್ವಾಧಿಕಾರಿ ಧೋರಣೆ ತೋರಿಸುತ್ತದೆ. ಕೇವಲ ಎಸ್​​ಪಿ ಕ್ಷಮೆ ಕೇಳಿದರೆ ಸಾಲದು, ಸ್ವತಃ ಮುಖ್ಯಮಂತ್ರಿಗಳೇ ಹಂಪನಾ ಅವರ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.

ABOUT THE AUTHOR

...view details