ಕರ್ನಾಟಕ

karnataka

By

Published : Mar 16, 2020, 10:46 AM IST

Updated : Mar 16, 2020, 1:31 PM IST

ETV Bharat / city

ಕೋವಿಡ್​-19 ಹಾವಳಿಗೆ ಶರಣಬಸವೇಶ್ವರ ಜಾತ್ರೆ ಸ್ತಬ್ಧ, ವ್ಯಾಪಾರಿಗಳು ಕಂಗಾಲು

ಅವರೆಲ್ಲ ಹೊಟ್ಟೆ ಪಾಡಿಗಾಗಿ ಊರೂರು ಅಲೆದು ಜಾತ್ರೆಗಳಲ್ಲಿ ಅಂಗಡಿ ಹಾಕಿಕೊಂಡು ವ್ಯಾಪಾರ ಮಾಡುವವರು. ಕಲಬುರಗಿಯ ಶರಣರ ಜಾತ್ರೆಯಲ್ಲೂ ಒಳ್ಳೆ ವ್ಯಾಪಾರದ ಆಸೆಯಿಂದ ಬಂದಿದ್ದರು. ಆದ್ರೆ ಬಡ ವ್ಯಾಪಾರಿಗಳ ಹೊಟ್ಟೆಗೆ ಕೊರೊನಾ ವೈರಸ್ ತಣ್ಣೀರು ಎರಚಿದೆ.

kn_klb_01_no_business_pkg_9023578
ಕೊರೊನಾ ಹಾವಳಿಗೆ ಶರಣಬಸವೇಶ್ವರ ಜಾತ್ರೆ ಸ್ತಬ್ಧ, ವ್ಯಾಪಾರಿಗಳು ಕಂಗಾಲು..!

ಕಲಬುರಗಿ: ಅವರೆಲ್ಲ ಹೊಟ್ಟೆ ಪಾಡಿಗಾಗಿ ಊರೂರು ಅಲೆದು ಜಾತ್ರೆಗಳಲ್ಲಿ ಅಂಗಡಿ ಹಾಕಿಕೊಂಡು ವ್ಯಾಪಾರ ಮಾಡುವವರು. ಕಲಬುರಗಿಯ ಶರಣನ ಜಾತ್ರೆಯಲ್ಲೂ ಒಳ್ಳೆ ವ್ಯಾಪಾರದ ಆಸೆಯಿಂದ ಬಂದಿದ್ದರು. ಆದ್ರೆ ಬಡ ವ್ಯಾಪಾರಿಗಳ ಹೊಟ್ಟೆ ಮೇಲೆ ಕೊರೊನಾ ವೈರಸ್ ತಣ್ಣೀರು ಎರಚಿದೆ.

ಕಲ್ಯಾಣ ಕರ್ನಾಟಕದ ಕಲಬುರಗಿಯ ಸುಪ್ರಸಿದ್ಧ ಶರಣಬಸವೇಶ್ವರ ಜಾತ್ರೆಗೆ ತಟ್ಟಿದ ಕೊರೊನಾ ಭೀತಿ ಉಂಟಾಗಿದೆ. ಕಾಯಕ ದಾಸೋಹಿ ಶರಣಬಸವೇಶ್ವರರ 198ನೇ ಜಾತ್ರಾ ಮಹೋತ್ಸವ ಜರುಗುತ್ತಿದೆ. ಆದ್ರೆ ಇತ್ತೀಚೆಗೆ ಮಾಹಾಮಾರಿ ಕೊರೊನಾ ವೈರಸ್ ಗೆ ನಗರದ ವೃದ್ಧನೋರ್ವ ಬಲಿಯಾಗಿರುವುದು ಜನರಲ್ಲಿ ಭಯ, ಆತಂಕಕ್ಕೆ ಕಾರಣವಾಗಿದೆ.

ಕೋವಿಡ್​-19 ಹಾವಳಿಗೆ ಶರಣಬಸವೇಶ್ವರ ಜಾತ್ರೆ ಸ್ತಬ್ಧ, ವ್ಯಾಪಾರಿಗಳು ಕಂಗಾಲು

ಕೊರೊನಾ ವೈರಸ್ ಭೀತಿ ಜೊತೆಗೆ ಜಿಲ್ಲಾಡಳಿತ ಮುಂಜಾಗ್ರತಾ ಮನವಿ ಹಿನ್ನೆಲೆ ಜನರು ಜಾತ್ರೆಗೆ ಬರಲು ಹಿಂದೇಟು ಹಾಕ್ತಿದ್ದಾರೆ. ಆದರೆ ಜಾತ್ರೆಯನ್ನೇ ನಂಬಿಕೊಂಡು ಬದುಕುವ ಬಡ ವ್ಯಾಪಾರಿಗಳು ವ್ಯಾಪಾರವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

Last Updated : Mar 16, 2020, 1:31 PM IST

For All Latest Updates

TAGGED:

ABOUT THE AUTHOR

...view details