ಕರ್ನಾಟಕ

karnataka

ETV Bharat / city

ಕಲಬುರಗಿಗೆ ಕೇಂದ್ರ ಅಧ್ಯಯನ ತಂಡ ಭೇಟಿ: ಸೂಕ್ತ ದಾಖಲೆ ನೀಡುವಂತೆ ಅಧಿಕಾರಿಗಳಿಗೆ ತರಾಟೆ - ಕೇಂದ್ರ ನೆರೆ ಪ್ರವಾಹ ಅಧ್ಯಯನ ತಂಡ

ಭೀಮಾ ನದಿ ಪ್ರವಾಹದಿಂದ ಹಾನಿಯಾದ ಸ್ಥಳಗಳಿಗೆ ಕೇಂದ್ರ ನೆರೆ ಪ್ರವಾಹ ಅಧ್ಯಯನ ತಂಡ ಭೇಟಿ ನೀಡಿ ಹಾನಿಗೊಳಗಾದ ಸ್ಥಳ ಪರಿಶೀಲನೆ ನಡೆಸಿತು. ಬರಿ ಬಾಯಿ ಮಾತಿನಿಂದ ಹೇಳಿದರೆ ಸಾಲದು, ಹಾನಿಯಾದ ಪ್ರದೇಶದ ಬಗ್ಗೆ ಸೂಕ್ತ ದಾಖಲೆ ತೋರಿಸಿದರೆ ಮಾತ್ರ ನನಗೆ ಮನವರಿಕೆಯಾಗುತ್ತದೆ ಎಂದು ತಂಡದ ಮುಖ್ಯಸ್ಥ ರಮೇಶಕುಮಾರ್ ಘಂಟಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

central-flood-study-team-visit-kalabaragi
ಕೇಂದ್ರ ಅಧ್ಯಯನ ತಂಡ

By

Published : Dec 14, 2020, 3:50 PM IST

Updated : Dec 14, 2020, 4:36 PM IST

ಕಲಬುರಗಿ:ಜಿಲ್ಲೆಗೆ ಭೇಟಿ ನೀಡಿದ ಕೇಂದ್ರ ನೆರೆ ಪ್ರವಾಹ ಅಧ್ಯಯನ ತಂಡ ಭೀಮಾ ನದಿ ಪ್ರವಾಹದಿಂದ ಹಾನಿಯಾದ ಸ್ಥಳಗಳಿಗೆ ತೆರಳಿ ಪರಿಶೀಲನೆ ನಡೆಸಿತು.

ಕೇಂದ್ರ ಗೃಹ ಸಚಿವಾಲಯದ ರಮೇಶ್​ ಕುಮಾರ್​ ಘಂಟಾ ನೇತೃತ್ವದಲ್ಲಿ ಕೇಂದ್ರ ಹಣಕಾಸು ಸಚಿವಾಲಯದ ವೆಚ್ಚ ವಿಭಾಗದ ನಿರ್ದೇಶಕ ಭತೇಂದ್ರ ಕುಮಾರ್​ ಸಿಂಗ್​​ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್​ ರಾಜನ್​​​​​ ಅವರ ತಂಡ ಬೆಂಗಳೂರಿನಿಂದ ವಿಮಾನದ ಮೂಲಕ ಕಲಬುರಗಿಗೆ ಆಗಮಿಸಿತು.

ಮೊದಲು ಡಿಸಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ಜೊತೆ ಪ್ರವಾಹ ಪರಿಸ್ಥಿತಿಯ ಕುರಿತು ಚರ್ಚಿಸಿದರು. ಕೇಂದ್ರ ತಂಡಕ್ಕೆ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಮಾಹಿತಿ ನೀಡಿದರು. ಅಧಿಕಾರಿಗಳಿಂದ ಮಾಹಿತಿ ಪಡೆದ ನಂತರ ನೆರೆಪೀಡಿತ ಪ್ರದೇಶಗಳ ಕಡೆ ತಂಡ ಸಾಗಿತು.

ಓದಿ-ಹಸುಗೂಸಿನೊಂದಿಗೆ ಬಸ್​ ನಿಲ್ದಾಣದಲ್ಲಿ ಪರದಾಡ್ತಿದ್ದ ಮಹಿಳೆ: ಕಷ್ಟಕ್ಕೆ ಸ್ಪಂದಿಸಿ, ನೆರವಾದ ಆಟೋ ಚಾಲಕರು

ಕಪನೂರು ಕೈಗಾರಿಕಾ ಪ್ರದೇಶದ ಎಸ್.ಟಿ.ಪಿ. ಪ್ಲಾಂಟ್​ಗೆ ಮೊದಲು ಭೇಟಿ ನೀಡಿದ ತಂಡ, ನಂತರ ತಾಲೂಕಿನ ಫರತಾಬಾದ್ ಕಡೆ ಪ್ರಯಾಣ ಬೆಳೆಸಿತು. ಭೀಮಾ ಪ್ರವಾಹ ಹಾಗೂ ಅತಿವೃಷ್ಟಿಯಿಂದ ತೀವ್ರ ಹಾನಿಗೆ ತುತ್ತಾಗಿರೋ ಪ್ರದೇಶಗಳಿಗೆ ಭೇಟಿ ನೀಡಿ, ರೈತರಿಂದಲೂ ಮಾಹಿತಿ ಪಡೆಯಿತು.

ಕಲಬುರಗಿಗೆ ಕೇಂದ್ರ ನೆರೆ ಪ್ರವಾಹ ಅಧ್ಯಯನ ತಂಡ ಭೇಟಿ

ಈ ಸಂದರ್ಭದಲ್ಲಿ ಕೇವಲ ಬಾಯಿ ಮಾತಿನಿಂದ ಹೇಳಿದರೆ ಸಾಕಾಗೋದಿಲ್ಲ. ಹಾನಿಯಾದ ಪ್ರದೇಶದ ಬಗ್ಗೆ ಸೂಕ್ತ ದಾಖಲೆ ತೋರಿಸಿದರೆ ಮಾತ್ರ ನನಗೆ ಮನವರಿಕೆಯಾಗುತ್ತದೆ ಎಂದು ತಂಡದ ಮುಖ್ಯಸ್ಥ ರಮೇಶಕುಮಾರ್ ಘಂಟಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

Last Updated : Dec 14, 2020, 4:36 PM IST

ABOUT THE AUTHOR

...view details