ಕರ್ನಾಟಕ

karnataka

ETV Bharat / city

ಭೀಮಾ ಪ್ರವಾಹ: ನಡುಗಡ್ಡೆಯಾದ ಉಡಚಣ ಗ್ರಾಮ, 225 ಜನರ ರಕ್ಷಣೆ..

ಉಡಚಣ ಗ್ರಾಮ ಭೀಮಾ ನದಿ ತಟದಲ್ಲಿದ್ದು, ಗ್ರಾಮಕ್ಕೆ ಒಂದಡೆ ನದಿಯಿಂದ ನೇರವಾಗಿ ನೀರು ನುಗ್ಗಿದ್ದು, ಇನ್ನೊಂದೆಡೆ ಅದರ ಹಿನ್ನೀರು ಊರೊಳಗೆ ನುಗ್ಗಿದೆ. ಪ್ರವಾಹದಲ್ಲಿ ಸಿಲುಕಿದ 225 ಜನ ಉಡಚಣ ಗ್ರಾಮಸ್ಥರನ್ನು ಎನ್​​ಡಿಆರ್​​ಎಫ್ ತಂಡ, ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

By

Published : Oct 18, 2020, 7:47 AM IST

bhima-river-flood-in-kalaburagi-village-of-udachana
ಭೀಮಾ ಪ್ರವಾಹ: ನಡುಗಡ್ಡೆಯಾದ ಉಡಚಣ ಗ್ರಾಮ, 225 ಜನರ ರಕ್ಷಣೆ..

ಕಲಬುರಗಿ:ಭೀಮಾ ಪ್ರವಾಹದಿಂದ ಅಫಜಲಪುರ ತಾಲೂಕಿನ ಉಡಚಣ ಗ್ರಾಮಕ್ಕೆ ಎರಡು ಕಡೆಯಿಂದ ನೀರು ನುಗ್ಗಿದ್ದು, ನಡುಗಡ್ಡೆಯಾಗಿ ಪರಿವರ್ತನೆಗೊಂಡಿದೆ.

ಭೀಮಾ ಪ್ರವಾಹ: ನಡುಗಡ್ಡೆಯಾದ ಉಡಚಣ ಗ್ರಾಮ, 225 ಜನರ ರಕ್ಷಣೆ..

ಉಡಚಣ ಗ್ರಾಮ ಭೀಮಾ ನದಿ ತಟದಲ್ಲಿದ್ದು, ಗ್ರಾಮಕ್ಕೆ ಒಂದಡೆ ನದಿಯಿಂದ ನೇರವಾಗಿ ನೀರು ನುಗ್ಗಿದ್ದು, ಇನ್ನೊಂದೆಡೆ ಹಿನ್ನೀರು ಗ್ರಾಮಕ್ಕೆ ನುಗ್ಗಿದೆ. ಪ್ರವಾಹದಲ್ಲಿ ಸಿಲುಕಿದ 225 ಜನ ಉಡಚಣ ಗ್ರಾಮಸ್ಥರನ್ನು ಎನ್​​ಡಿಆರ್​​ಎಫ್ ತಂಡ, ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೋಟ್ ಸಹಾಯದಿಂದ ರಕ್ಷಣೆ ಮಾಡಿದ್ದಾರೆ.

ಮಹಾರಾಷ್ಟ್ರದಿಂದ 8 ಲಕ್ಷ ಕ್ಯೂಸೆಕ್ ನೀರು ಸೊನ್ನ ಬ್ಯಾರೇಜ್ ಗೆ ಹರಿದು ಬರುತ್ತಿದ್ದು, ಅಷ್ಟೇ ಪ್ರಮಾಣದ ನೀರು ಭೀಮಾ ನದಿಗೆ ಹರಿಬಿಟ್ಟ ಪರಿಣಾಮ ಪ್ರವಾಹ ಉಂಟಾಗಿದೆ. ಜಿಲ್ಲೆಯ 157 ಹಳ್ಳಿಗಳಿಗೆ ಜಲ ಕಂಟಕ ಎದುರಾಗಿದೆ.

ABOUT THE AUTHOR

...view details