ಕರ್ನಾಟಕ

karnataka

ETV Bharat / city

ರಾಮನವಮಿ ಆಚರಣೆ ಸಂದರ್ಭ ಕಲಬುರಗಿಯ ಕೇಂದ್ರೀಯ ವಿವಿ ಆವರಣದಲ್ಲಿ ಗಲಾಟೆ: ನಾಲ್ವರ ವಿರುದ್ಧ ಎಫ್​ಐಆರ್​

ರಾಮನವಮಿ ಆಚರಿಸಿದ ವಿದ್ಯಾರ್ಥಿಗಳ ಮೇಲೆ ಮತ್ತೊಂದು ಗುಂಪಿನ ವಿದ್ಯಾರ್ಥಿಗಳು ಹಲ್ಲೆ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ನಾಲ್ವರ ಮೇಲೆ ಎಫ್​ಐಆರ್​ ದಾಖಲಾಗಿದ್ದು, ಇದುವರೆಗೆ ಯಾರನ್ನೂ ಪೊಲೀಸರು ವಶಕ್ಕೆ ಪಡೆದಿಲ್ಲ.

By

Published : Apr 11, 2022, 9:49 AM IST

Updated : Apr 11, 2022, 5:50 PM IST

assault-on-students-who-celebrated-ramanavami
ರಾಮನವಮಿ ಆಚರಿಸಿದ ವಿದ್ಯಾರ್ಥಿಗಳ ಮೇಲೆ ಹಲ್ಲೆ

ಕಲಬುರಗಿ: ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯದ ಆವರಣದಲ್ಲಿ ಗಲಾಟೆ ನಡೆದಿದ್ದು, ರಾಮನವಮಿ ಆಚರಿಸಿದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದಾರೆ. ಈ ಸಂಬಂಧ ನಾಲ್ವರ ವಿರುದ್ದ ಎಫ್​ಐಆರ್​​​ ದಾಖಲಾಗಿದೆ.

ರಾಮನವಮಿ ಆಚರಣೆ ಸಂದರ್ಭ ಕಲಬುರಗಿಯ ಕೇಂದ್ರೀಯ ವಿವಿ ಆವರಣದಲ್ಲಿ ಗಲಾಟೆ

ಆಳಂದ ತಾಲೂಕಿನ ಕಡಗಂಚಿಯ ಕೇಂದ್ರೀಯ ವಿಶ್ವವಿದ್ಯಾಲಯದ ಆವರಣದಲ್ಲಿ ನಿನ್ನೆ ಗಲಾಟೆ ನಡೆದಿದೆ. ರಾಮನವಮಿ ಆಚರಿಸಿದ್ದ‌ಕ್ಕೆ ಗುಂಪೊಂದರಿಂದ ಹಲ್ಲೆ ನಡೆದಿದೆ. ಘಟನೆಯಲ್ಲಿ ವಿಶ್ವನಾಥ, ನರೇಂದ್ರ ಎಂಬ ವಿದ್ಯಾರ್ಥಿಗಳಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಾಯಗೊಂಡವರು ಎಬಿವಿಪಿ ಸಂಘಟನೆಗೆ ಸೇರಿದ ವಿದ್ಯಾರ್ಥಿಳಾಗಿದ್ದಾರೆ. ಈ ಘಟನೆ ಖಂಡಿಸಿ ಇಂದು ಎಬಿವಿಪಿ ಪ್ರತಿಭಟನೆ ನಡೆದಿದೆ. ನರೋಣಾ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ಹಲ್ಲೆ ಪ್ರಕರಣ ನಡೆದಿದೆ.

ರಾಮನವಮಿ ಪ್ರಯುಕ್ತ ಕ್ಯಾಂಪಸ್​​ನಲ್ಲಿನ ಲಕ್ಷ್ಮೀ ದೇವಸ್ಥಾನದಲ್ಲಿ ಆಚರಣೆ ಮಾಡಿದೆವು, ಸುಮಾರು 70-80 ವಿದ್ಯಾರ್ಥಿಗಳು ಭಾಗವಹಿಸಿದ್ದೆವು. ಪ್ರಸಾದ ಸ್ವೀಕರಿಸಿ ತೆರಳುತ್ತಿರುವಾಗ ನಾಲ್ವರು ಯುವಕರು ನಮ್ಮ ಮೇಲೆ ಹಲ್ಲೆ ನಡೆಸಿ, ಕೊಲೆ ಹಾಗೂ ಅಪಹರಣ ಬೆದರಿಕೆ ಹಾಕಿದ್ದಾರೆ. ಆರೋಪಿಗಳು ಮೊದಲೇ ಬಂದು ನಿಂತಿದ್ದು, ನಾವು ನಾಲ್ಕು ಮಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಎಬಿವಿಪಿ ಎಂಬ ಕಾರಣಕ್ಕೆ ಮೊದಲಿನಿಂದಲೂ ನಮಗೆ ಬೆದರಿಕೆ ಹಾಕುತ್ತಿದ್ದರು. ಕ್ಯಾಂಪಸ್​ನಲ್ಲಿ ಯಾವುದೇ ಆಚರಣೆ ನಡೆಸಬಾರದು ಎಂದು ಈ ಹಿಂದಿನಿಂದಲೂ ನಮಗೆ ಬೆದರಿಕೆ ಹಾಕುವುದು ನಡೆಯುತ್ತಿತ್ತು. ಬ್ಲೇಡ್​ನಿಂದ ಕೊಯ್ಯಲಾಗಿದೆ, ಜಗಳ, ಗಲಾಟೆ ನಡೆದಿರುವುದು ಇದೇ ಮೊದಲಾಗಿದೆ. ಈ ಹಿಂದೆ ಯಾವುದೇ ಗಲಾಟೆ ನಡೆದಿರಲಿಲ್ಲ. ಸಾದಿಕ್​, ರಾಹುಲ್,​ ರಾಹುಲ್​ ಆರ್ಯ ಹಾಗೂ ಮತ್ತೋರ್ವ ಯುವಕನಿಂದ ಹಲ್ಲೆ ನಡೆದಿದೆ ಎಂದು ಗಾಯಗೊಂಡ ವಿದ್ಯಾರ್ಥಿ ವಿಶ್ವನಾಥ ಮಾಧ್ಯಮದವರಿಗೆ ಹೇಳಿದ್ದಾರೆ.

ಈ ಬಗ್ಗೆ ಕಲಬುರಗಿ ಎಸ್​ಪಿ ಇಶಾ ಪಂತ್​​ ಪ್ರತಿಕ್ರಿಯಿಸಿದ್ದು, ನಿನ್ನೆ ರಾತ್ರಿಯೇ ರಾಹುಲ್​​, ಸಾದಿಕ್​ ಸೇರಿ ನಾಲ್ವರ ಮೇಲೆ ಎಫ್​ಐಆರ್​​​ ದಾಖಲಾಗಿದೆ. ಪ್ರಾಥಮಿಕ ತನಿಖೆ ನಡೆಸುತ್ತಿದ್ದೇವೆ. ಗಾಯಗೊಂಡ ಎಬಿವಿಪಿ ಕಾರ್ಯಕರ್ತರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ವಿದ್ಯಾರ್ಥಿಗಳ ನಡುವೆಯೇ ಗಲಾಟೆ ನಡೆದಿದೆ. ಗಾಯಗೊಂಡವರಿಂದ ಎಲ್ಲ ಮಾಹಿತಿ ಪಡೆದುಕೊಂಡಿದ್ದು, ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಹಲ್ಲೆಯಿಂದ ಘಟನೆ ಬಳಿಕ ಎಬಿವಿಪಿ ಮತ್ತು ಶ್ರೀರಾಮಸೇನೆ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಇತ್ತ ಸುಖಾಸುಮ್ಮನೆ ದಲಿತ ವಿದ್ಯಾರ್ಥಿಗಳ ಮೇಲೆ ಹಲ್ಲೆ ಆರೋಪ ಮಾಡಲಾಗುತ್ತಿದೆ ಎಂದು ದಲಿತ ಸೇನೆ ಕೂಡ ಪ್ರತಿಭಟನೆ ನಡೆಸಿದೆ.

ಇದನ್ನೂ ಓದಿ:ಅವ್ರು ಮಾಂಸದೂಟ ಬೇಕು ಅಂದ್ರು, ಇವ್ರು ರಾಮನವಮಿ ದಿನ ಬೇಡ ಅಂದ್ರು.. ಇಷ್ಟಕ್ಕೆ ಜೆಎನ್​ಯು ಕ್ಯಾಂಪಸ್​ ರಕ್ತಸಿಕ್ತ!

Last Updated : Apr 11, 2022, 5:50 PM IST

ABOUT THE AUTHOR

...view details