ಕರ್ನಾಟಕ

karnataka

By

Published : Nov 19, 2020, 1:06 PM IST

ETV Bharat / city

ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಾಪಸ್​​ ಪಡೆದ ವಕೀಲರು

ವಿನಯ್ ಕುಲಕರ್ಣಿ ಪರ ವಕೀಲರು ಜಾಮೀನು ಅರ್ಜಿ ಹಿಂಪಡೆದ ಪರಿಣಾಮ ತಕರಾರು ಅರ್ಜಿ ಸಲ್ಲಿಸಲು ಬಂದಿದ್ದ ಸಿಬಿಐ ವಕೀಲರು 3ನೇ ಹೆಚ್ಚುವರಿ ಸೆಷನ್ ನ್ಯಾಯಾಲಯದಿಂದ ಮರಳಿದರು.

vinay-kulkarnis-bail-withdraw
ವಿನಯ್ ಕುಲಕರ್ಣಿ

ಧಾರವಾಡ: ಜಿಪಂ ಸದಸ್ಯ ಯೋಗೇಶ್ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ವಿನಯ ಕುಲಕರ್ಣಿ ಜಾಮೀನು ಅರ್ಜಿಯನ್ನು 3ನೇ ಹೆಚ್ಚುವರಿ ಸೆಷನ್ ನ್ಯಾಯಾಲಯದಲ್ಲಿ ಅವರ ಪರ ವಕಾಲತ್ತು ವಹಿಸಿರುವ ವಕೀಲರು ಹಿಂಪಡೆದಿದ್ದಾರೆ‌.

ಹೀಗಾಗಿ, ಜಾಮೀನು ಅರ್ಜಿ ವಾಪಸ್​​ ಪಡೆದ ಪರಿಣಾಮ ತಕರಾರು ಅರ್ಜಿ ಸಲ್ಲಿಸಲು ಬಂದಿದ್ದ ಸಿಬಿಐ ವಕೀಲರು ಅಲ್ಲಿಂದ ಮರಳಿದರು. ಆದರೆ, ಜಾಮೀನು ಹಿಂಪಡೆದಿರುವುದಕ್ಕೆ ಯಾವುದೇ ನಿಖರವಾದ ಮಾಹಿತಿಯಿಲ್ಲ. ಆದರೆ, ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸುವ ನಿರೀಕ್ಷೆಯಿದೆ.

ABOUT THE AUTHOR

...view details