ಕರ್ನಾಟಕ

karnataka

ETV Bharat / city

ಶವ ತೆಗೆದುಕೊಂಡು ಹೋಗಲು ಬರುತ್ತಿದ್ದ ವಾಹನಕ್ಕೆ ಬಸ್​​ ಡಿಕ್ಕಿ: ಸಹೋದರರು ಸೇರಿ ಮೂವರು ಸಾವು - road accident in Hubli

ಶವ ತೆಗೆದುಕೊಂಡು ಹೋಗಲು ಆಗಮಿಸುತ್ತಿದ್ದ ಕ್ರೂಸರ್ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿ ಹೊಡೆದು ಸಾವುನೋವು ಸಂಭವಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

road accident in Hubli
ಕ್ರೂಸರ್​​ಗೆ ಬಸ್​​ ಡಿಕ್ಕಿ

By

Published : Aug 22, 2022, 9:30 AM IST

Updated : Aug 22, 2022, 1:37 PM IST

ಹುಬ್ಬಳ್ಳಿ: ಕಿಮ್ಸ್​​ನಲ್ಲಿ ಸಾವಿಗೀಡಾದ ವ್ಯಕ್ತಿಯ ಶವ ತೆಗೆದುಕೊಂಡು ಬರಲು ಹೊರಟಿದ್ದ ಕ್ರೂಸರ್​​ಗೆ ಬಸ್​​ ಡಿಕ್ಕಿ ಹೊಡೆದು ಮೂವರು ಸಾವನ್ನಪ್ಪಿದ್ದಾರೆ. ಕಲಘಟಗಿ ತಾಲೂಕಿನ ರಾಮನಾಳ ಕ್ರಾಸ್ ಬಳಿ ದುರ್ಘಟನೆ ನಡೆಯಿತು.

ಹಳಿಯಾಳ ತಾಲೂಕಿನ ನಂದಿಗಟ್ಟ ಗ್ರಾಮದ ಸಹೋದರರಾದ ಶಿವನಗೌಡ ಪಾಟೀಲ ಹಾಗೂ ಅಮೃತ ಪಾಟೀಲ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಕ್ರೂಸರ್ ಚಾಲಕ ಮಾರುತಿ ಎಂಬಾತನಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆ ‌ಫಲಿಸದೇ ಕಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

ಅಪಘಾತದ ರಭಸಕ್ಕೆ ಕ್ರೂಸರ್ ವಾಹನ ಎರಡು ತುಂಡಾಗಿದೆ. ಕ್ರೂಸರ್ ವಾಹನದಲ್ಲಿದ್ದ ಇನ್ನೂ ಇಬ್ಬರು ಗಾಯಾಳುಗಳು ಕಿಮ್ಸ್​​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಬೆಂಗಳೂರಲ್ಲಿ ಭೀಕರ ಅಪಘಾತ: ಇಬ್ಬರು ಬೈಕ್​ ಸವಾರರಿಗೆ ಗಂಭೀರ ಗಾಯ

Last Updated : Aug 22, 2022, 1:37 PM IST

ABOUT THE AUTHOR

...view details