ಕರ್ನಾಟಕ

karnataka

ETV Bharat / city

ಲೋಕಾಯುಕ್ತದ ಬಗ್ಗೆ ಮಾತನಾಡುವ ನೈತಿಕತೆ ಸಿದ್ದರಾಮಯ್ಯಗಿಲ್ಲ: ಜಗದೀಶ್ ಶೆಟ್ಟರ್ ವಾಗ್ದಾಳಿ - ಎಸಿಬಿ ಬಗ್ಗೆ ನಮ್ಮ ನಿಲುವು ಏನು ಎಂಬುವುದನ್ನು ನಾವು ಅಧಿವೇಶನದಲ್ಲಿ ಹೇಳುತ್ತೇವೆ

ಎಸಿಬಿ ಹಾಗೂ ಲೋಕಾಯುಕ್ತದ ಬಗ್ಗೆ ಮಾತನಾಡುವ ನೈತಿಕತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇಲ್ಲ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

Kn_hbl_02_jagadish_shetter_avb_7208089
ಸಿದ್ದರಾಮಯ್ಯ ಲೋಕಾಯುಕ್ತದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ: ಜಗದೀಶ್ ಶೆಟ್ಟರ್ ವಾಗ್ದಾಳಿ

By

Published : Feb 15, 2020, 2:29 PM IST

ಹುಬ್ಬಳ್ಳಿ:ಎಸಿಬಿ ಹಾಗೂ ಲೋಕಾಯುಕ್ತದ ಬಗ್ಗೆ ಮಾತನಾಡುವ ನೈತಿಕತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇಲ್ಲ ಎಂದು ಸಚಿವ ಜಗದೀಶ್ ಶೆಟ್ಟರ್ ಅವರು ವಾಗ್ದಾಳಿ ನಡೆಸಿದರು.

ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್
ನೈತಿಕತೆಯನ್ನು ಬಿಟ್ಟು ಲೋಕಾಯುಕ್ತ ರದ್ದು‌ ಮಾಡಿ ಎಸಿಬಿ ಜಾರಿಗೆ ತಂದಿರುವ ಸಿದ್ದರಾಮಯ್ಯ ಅವರಿಂದ ನಾವು ಪಾಠ ಕಲಿಯುವ ಅವಶ್ಯಕತೆಯಿಲ್ಲ. ಎಸಿಬಿ ಬಗ್ಗೆ ನಮ್ಮ ನಿಲುವು ಏನು ಎಂಬುವುದನ್ನು ನಾವು ಅಧಿವೇಶನದಲ್ಲಿ ಹೇಳುತ್ತೇವೆ ಎಂದರು.

ಐದು ವರ್ಷ ಅಧಿಕಾರದಲ್ಲಿದ್ದ ಸಿದ್ದರಾಮಯ್ಯನವರು ಯಾಕೆ ಎಸಿಬಿ ರದ್ದು ಮಾಡಲಿಲ್ಲ. ಈಗ ಎಸಿಬಿ ವಿಫಲತೆಯ ಬಗ್ಗೆ ಮಾತನಾಡುತ್ತಿದ್ದಾರೆ. ಬಿಜೆಪಿ ಬಗ್ಗೆ ನರೇಂದ್ರ ಮೋದಿಯವರ ಬಗ್ಗೆ ಅವರಿಗೆ ಯಾವ ವಿಷಯ ಸಿಗುತ್ತಿಲ್ಲ ಹೀಗಾಗಿ ಕುಂಟು ನೆಪ ಹೇಳುವ ಮೂಲಕ ಎಸಿಬಿ ರದ್ದುಪಡಿಸಲು ಹೇಳುತ್ತಿದ್ದಾರೆ ಎಂದು ಶೆಟ್ಟರ್​ ಕಿಡಿಕಾರಿದರು.

ABOUT THE AUTHOR

...view details