ಕರ್ನಾಟಕ

karnataka

ಧಾರವಾಡದಲ್ಲಿ ಯುವಕರ ಪ್ರಾಣ ಉಳಿಸಿತು ಗೃಹಿಣಿ ಮಾಡಿದ ಆ ಒಂದು ಉಪಾಯ

By

Published : Oct 21, 2019, 3:28 PM IST

ಧಾರವಾಡದ ಕುಂಬಾರ ಓಣಿಯಲ್ಲಿ ಗೃಹಿಣಿವೋರ್ವರು ಮಾಡಿದ ಉಪಾಯ ಯುವಕರ ಪ್ರಾಣ ಉಳಿಸಿದೆ.

ಮನೆ ಕುಸಿತ

ಧಾರವಾಡ: ಗೃಹಿಣಿಯೊಬ್ಬರು ಮಾಡಿದ ಉಪಾಯದಿಂದ ನಡೆಯಬಹುದಾದ ಅನಾಹುತವೊಂದು ತಪ್ಪಿದ ಘಟನೆ ನಗರದ ಕುಂಬಾರ ಓಣಿಯಲ್ಲಿ ನಡೆದಿದೆ.

ಯುವಕರ ಪ್ರಾಣ ಉಳಿಸಿದ ಮಹಿಳೆ

ಧಾರವಾಡ ನಗರದ ಕುಂಬಾರ ಓಣಿಯಲ್ಲಿ ಬೀಗ ಹಾಕಿದ ಮನೆಯ ಕಟ್ಟೆ ಮೇಲೆ ಪ್ರತಿನಿತ್ಯ ಮೊಬೈಲ್ ಹಿಡಿದು ಯುವಕರು ಹರಟೆ ಹೊಡೆಯುತ್ತಾ, ಪಬ್ಜಿ ಆಡುತ್ತಿದ್ದರು. ಪಕ್ಕದ ಮನೆಯವರು ಯುವಕರಿಗೆ ಇಲ್ಲಿ ಕೂರಬೇಡಿ ಎಂದು ಬುದ್ದಿ ಸಹ ಹೇಳಿದ್ದರು. ಆದರೆ, ಯುವಕರು ಮಾತನ್ನು ಕೇಳದ ಹಿನ್ನೆಲೆ ಮನೆ ಕಟ್ಟೆ ಮೇಲೆ ಗೃಹಿಣಿಯೊಬ್ಬರು ಡಾಂಬರ್ ಸುರಿದಿದ್ದರು.ನಿನ್ನೆ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿದಿದ್ದು, ಮಳೆಯ ರಭಸಕ್ಕೆ ಮನೆ ನೆಲಸಮವಾಗಿದೆ. ಇದರಿಂದ ನಡೆಯಬಹುದಾಗಿದ್ದ ಅನಾಹುತ ತಪ್ಪಿಸಿದಂತಾಗಿದೆ.

ABOUT THE AUTHOR

...view details