ಕರ್ನಾಟಕ

karnataka

ETV Bharat / city

ಎಂಇಎಸ್ ಹುತಾತ್ಮ ದಿನ ಆಚರಣೆ ವಿರೋಧಿಸಿ ಪ್ರತಿಭಟನೆ - protest in dharwad against martyrdom celebration by MES

ಜ. 17 ಕ್ಕೆ ಎಂಇಎಸ್ ಸಂಘಟನೆ ಆಚರಿಸುವ ಹುತಾತ್ಮ ದಿನಾಚರಣೆಗೆ ಪರವಾನಿಗೆ ನೀಡಬಾರದು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಬೆಳಗಾವಿ‌ ವಿಭಾಗೀಯ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

protest in dharwad against martyrdom celebration by MES
ಎಂಇಎಸ್ ಹುತಾತ್ಮ ದಿನ ವಿರೋಧಿಸಿ ಪ್ರತಿಭಟನೆ

By

Published : Jan 13, 2020, 6:50 PM IST

ಧಾರವಾಡ: ಜ. 17 ಕ್ಕೆ ಎಂಇಎಸ್ ಸಂಘಟನೆ ಆಚರಿಸುವ ಹುತಾತ್ಮ ದಿನಾಚರಣೆಗೆ ಪರವಾನಿಗೆ ನೀಡಬಾರದು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಬೆಳಗಾವಿ‌ ವಿಭಾಗೀಯ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಎಂಇಎಸ್ ಹುತಾತ್ಮ ದಿನ ವಿರೋಧಿಸಿ ಪ್ರತಿಭಟನೆ

ಜಿಲ್ಲಾಧಿಕಾರಿ ‌ಕಚೇರಿ‌ ಎದುರು ಜಮಾಯಿಸಿದ ಸ್ವಾಭಿಮಾನಿ ಬಣದ ಕಾರ್ಯಕರ್ತರು, ಎಂಇಎಸ್ ವಿರುದ್ಧ ಧಿಕ್ಕಾರ ಕೂಗಿ, ಜಿಲ್ಲಾಧಿಕಾರಿ ದೀಪಾ ಚೋಳನ್​ ಅವರ ಮೂಲಕ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು. ಮರಾಠಿ ಸಾಹಿತ್ಯ ಸಮ್ಮೇಳನದ ಹೆಸರಿನಲ್ಲಿ ಸಮ್ಮೇಳನ ಆಯೋಜಿಸಿ, ಗಡಿವಿವಾದ ಕೆದಕಿ, ಕನ್ನಡಿಗರ ಹಾಗೂ ಮರಾಠಿ ಭಾಷಿಕರ ನಡುವೆ ಸಾಮರಸ್ಯ ಕೆಡಿಸಲು ಪ್ರಚೋದಿಸುತ್ತಿರುವವರ ವಿರುದ್ಧ ಕ್ರಮ‌ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮಹಾರಾಷ್ಟ್ರದಲ್ಲಿ ಶಿವಸೇನೆ ನೇತೃತ್ವದ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಗಡಿ ವಿವಾದ ಕೆದಕುವ ಮೂಲಕ ಉಭಯ ರಾಜ್ಯಗಳ ಭಾಷಾ ಸೌಹಾರ್ದತೆಗೆ ಧಕ್ಕೆ ತರುವ ಪ್ರಯತ್ನಗಳು ನಡೆಯುತ್ತಿದೆ ಎಂದು ಪ್ರತಿಭಟನಾಕಾರರು ಬೇಸರ ವ್ಯಕ್ತಪಡಿಸಿದರು.

ABOUT THE AUTHOR

...view details