ಕರ್ನಾಟಕ

karnataka

By

Published : Feb 3, 2020, 6:03 PM IST

ETV Bharat / city

ಅನುರಾಗ್ ಸಿಂಗ್ ಠಾಕೂರ್ ಕ್ಷಮೆಗೆ ಒತ್ತಾಯಿಸಿ ಪ್ರತಿಭಟನೆ..

ಕೇಂದ್ರ ಸಚಿವ ಅನುರಾಗ್​​ ಸಿಂಗ್ ಠಾಕೂರ್ 'ಗದ್ದಾರೋಂಕೋ ಗೋಲಿ ಮಾರೋ ಸಾಲೋಂಕೋ' ಎಂಬ ಅಸಂವಿಧಾನಿಕ ಶಬ್ಧ ಬಳಸಿದ್ದಾರೆ. ಸಚಿವ ಠಾಕೂರ್‌ ದೇಶದಲ್ಲಿ ಅಶಾಂತಿ ಮೂಡಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

protest-against-central-government
ಪ್ರತಿಭಟನೆ ನಡೆಸಿದ ಸಂವಿಧಾನ ಸುರಕ್ಷತಾ ಸಮಿತಿ

ಹುಬ್ಬಳ್ಳಿ:ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರನ್ನು ಬಂಧಿಸಿ ಕ್ರಮ ಜರುಗಿಸುವಂತೆ ಒತ್ತಾಯಿಸಿ ಹುಬ್ಬಳ್ಳಿಯ ತಹಶೀಲ್ದಾರ್​​ ಕಚೇರಿ ಎದುರು ಸಂವಿಧಾನ ಸುರಕ್ಷಾ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದ ದಿನದಿಂದ ಹಿಡಿದು ಈವರೆಗೂ ಬೃಹತ್ ಪ್ರಮಾಣದಲ್ಲಿ ವಿವಿಧ ಸಂಘಟನೆಗಳು ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿವೆ. ಆದರೆ, ಕಾರ್ಯಕ್ರಮವೊಂದರಲ್ಲಿ ಕೇಂದ್ರ ಸಚಿವ ಅನುರಾಗ್​​ ಸಿಂಗ್ ಠಾಕೂರ್ 'ಗದ್ದಾರೋಂಕೋ ಗೋಲಿ ಮಾರೋ ಸಾಲೋಂಕೋ' ಎಂಬ ಅಸಂವಿಧಾನಿಕ ಶಬ್ಧ ಬಳಸಿದ್ದಾರೆ. ಸಚಿವ ಠಾಕೂರ್‌ ದೇಶದಲ್ಲಿ ಅಶಾಂತಿ ಮೂಡಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನೆ ನಡೆಸಿದ ಸಂವಿಧಾನ ಸುರಕ್ಷಾ ಸಮಿತಿ

'ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ. ಈ ದಿಸೆಯಲ್ಲಿ ದೇಶದ ಯುವಕರಿಗೆ ಪ್ರಚೋದನೆ ಹೇಳಿಕೆಗಳನ್ನು ನೀಡಿ ದೇಶದಲ್ಲಿ ಅರಾಜಕತೆ ಸೃಷ್ಟಿಸುತ್ತಿದ್ದಾರೆ. ಕೂಡಲೇ ಸಚಿವ ಅನುರಾಗಸಿಂಗ್ ಠಾಕೂರ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಅಷ್ಟೇ ಅಲ್ಲ, ಸಚಿವ ಠಾಕೂರ್‌ ದೇಶದ ಪ್ರಜೆಗಳಲ್ಲಿ ಕ್ಷಮೆಯಾಚನೆ ಮಾಡಬೇಕೆಂದು ಒತ್ತಾಯಿಸಿ ತಹಶೀಲ್ದಾರ್​​ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ABOUT THE AUTHOR

...view details