ಹುಬ್ಬಳ್ಳಿ : ಅವಧಿ ಮೀರಿದ ಹಾಗೂ ಕೆಎಸ್ಬಿಸಿಎಲ್ ಡಿಪೋದಲ್ಲಿ ಬಹಳ ವರ್ಷಗಳಿಂದ ಮಾರಾಟವಾಗದೆ ಉಳಿದಿರುವ ಅಂದಾಜು 7 ಲಕ್ಷ ರೂ. ಮೌಲ್ಯದ ಮದ್ಯವನ್ನು ನಗರದ ಭೈರಿದೇವರಕೊಪ್ಪದ ಕರ್ನಾಟಕ ರಾಜ್ಯ ಪಾನೀಯ ನಿಗಮದ ಡಿಪೋ ಆವರಣದ ಹೊರಭಾಗದ ಇಂಗು ಗುಂಡಿಯಲ್ಲಿ ಶುಕ್ರವಾರ ನಾಶಪಡಿಸಲಾಯಿತು.
ಅವಧಿ ಮೀರಿದ 7 ಲಕ್ಷ ರೂ. ಮೌಲ್ಯದ ಮದ್ಯ ನಾಶ ಮಾಡಿದ ಅಬಕಾರಿ ಅಧಿಕಾರಿಗಳು - ಅವಧಿ ಮೀರಿದ ಮದ್ಯ ನಾಶ
ಬಹಳ ವರ್ಷಗಳಿಂದ ಮಾರಾಟವಾಗದೆ ಉಳಿದಿರುವ ಅಂದಾಜು 7 ಲಕ್ಷ ರೂ. ಮೌಲ್ಯದ ಮದ್ಯವನ್ನು ನಗರದ ಭೈರಿದೇವರಕೊಪ್ಪದ ಕರ್ನಾಟಕ ರಾಜ್ಯ ಪಾನೀಯ ನಿಗಮದ ಡಿಪೋ ಆವರಣದ ಹೊರಭಾಗದ ಇಂಗು ಗುಂಡಿಯಲ್ಲಿ ಇಂದು ನಾಶಪಡಿಸಿಲಾಯಿತು..

ಮದ್ಯ ನಾಶ
ಅವಧಿಮೀರಿದ 7 ಲಕ್ಷ ರೂ. ಮೌಲ್ಯದ ಮದ್ಯ ನಾಶ ಮಾಡಿದ ಅಬಕಾರಿ ಅಧಿಕಾರಿಗಳು
ಅವಧಿ ಮೀರಿದ ಮದ್ಯ ನಾಶ :ಅವಧಿ ಮೀರಿದ ಅಂದಾಜು 7.01 ಲಕ್ಷ ರೂ. ಮೌಲ್ಯದ 47 ಪೆಟ್ಟಿಗೆ ಹಾಗೂ 67 ಮದ್ಯದ ಬಾಟಲಿಗಳನ್ನು ನಾಶಪಡಿಸಲಾಯಿತು. ಈ ಸಂದರ್ಭದಲ್ಲಿ ಅಬಕಾರಿ ವಿಭಾಗದ ಅನಿಲಕುಮಾರ ನಂದೀಶ್ವರ, ಅಬಕಾರಿ ಇನ್ಸ್ಪೆಕ್ಟರ್ ನೇತ್ರಾ ಉಪ್ಪಾರ, ಉಪಾಧೀಕ್ಷಕ ನಯನಾ ನಾಯ್ಕ, ಕೆಎಸ್ಬಿಸಿಎಲ್ ವ್ಯವಸ್ಥಾಪಕ ಮಲ್ಲಿಕಾರ್ಜುನ ಇದ್ದರು.