ಕರ್ನಾಟಕ

karnataka

ETV Bharat / city

ಲಾಕ್​ಡೌನ್​ ಸಡಿಲಿಕೆ ಬಳಿಕ ವಾ.ಕ.ರಾ.ರ.ಸಾ.ಸಂ ಗಳಿಸಿದ ಆದಾಯವೆಷ್ಟು? - ಹುಬ್ಬಳ್ಳಿ

ಲಾಕ್​​ಡೌನ್ ಸಡಿಲಿಕೆಯ ಬಳಿಕ ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಸೇವೆ ಆರಂಭಗೊಂಡು ಒಂದು ತಿಂಗಳಾಗಿದ್ದು, ಈ ಅವಧಿಯಲ್ಲಿ 38 ಕೋಟಿಗೂ ಅಧಿಕ ಆದಾಯ ಸಂಗ್ರಹವಾಗಿದೆ.

NWKRTC
ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ

By

Published : Jun 25, 2020, 3:17 PM IST

ಹುಬ್ಬಳ್ಳಿ:ಲಾಕ್​​ಡೌನ್ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟ ಅನುಭವಿಸಿದ್ದ ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 8 ವಿಭಾಗಗಳಿಂದ ಇದೀಗ 38 ಕೋಟಿಗೂ ಅಧಿಕ ಆದಾಯ ಸಂಗ್ರಹವಾಗಿದೆ. ಆದರೆ ನಿರ್ವಹಣಾ ವೆಚ್ಚ ಭರಿಸಲು ಈ ಹಣ ಸಾಲುತ್ತಿಲ್ಲ ಎನ್ನಲಾಗ್ತಿದೆ.

ಲಾಕ್​​ಡೌನ್ ಸಡಿಲಿಕೆ ಬಳಿಕ ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಸೇವೆ ಆರಂಭಗೊಂಡು ಒಂದು ತಿಂಗಳು, ಆರು ದಿನಗಳಾಗಿವೆ. ಈ ಅವಧಿಯಲ್ಲಿ ಹಾವೇರಿ ವಿಭಾಗದಲ್ಲಿ ಅತಿ ಹೆಚ್ಚು ಅಂದರೆ 6.18 ಕೋಟಿ ರೂ. ಹಾಗೂ ಧಾರವಾಡದಲ್ಲಿ ಅತಿ ಕಡಿಮೆ ಅಂದರೆ 3.22 ಕೋಟಿ ರೂ. ಸಂಗ್ರಹವಾಗಿದೆ.

ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ 38 ಕೋಟಿ ರೂ. ಆದಾಯ

ಕೊರೊನಾ ಆತಂಕದಿಂದಾಗಿ ಸ್ಥಗಿತಗೊಂಡಿದ್ದ ಬಸ್ ಸೇವೆಯನ್ನು ಲಾಕ್‌ಡೌನ್ ತೆರವು ಬಳಿಕ, ಮಾರ್ಚ್ 19 ರಿಂದ ಪುನಾರಂಭಿಸಲಾಯಿತು. ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವುದರಿಂದ ಸಂಸ್ಥೆಯ 4,684 ಬಸ್‌ಗಳ ಪೈಕಿ 2,300 ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿವೆ. ಸಂಸ್ಥೆಯ ತಿಂಗಳ ಆದಾಯಕ್ಕೆ ಹೋಲಿಸಿದರೆ, ವೆಚ್ಚದ ಪ್ರಮಾಣವೇ ಹೆಚ್ಚಾಗಿದೆ. ಲಾಕ್‌ಡೌನ್‌ಗೂ ಮುಂಚೆ ಪ್ರತಿ ತಿಂಗಳು 180 ಕೋಟಿ ಆದಾಯ ಬರುತ್ತಿತ್ತು. ಸಿಬ್ಬಂದಿ ವೇತನ ಸೇರಿದಂತೆ ಇತರೆ ನಿರ್ವಹಣಾ ವೆಚ್ಚವೂ ಅಂದಾಜು 180 ಕೋಟಿ ಆಗುತ್ತಿತ್ತು. ಈಗ ಎಲ್ಲವೂ ಕಡಿಮೆಯಾಗಿದೆ.

ABOUT THE AUTHOR

...view details