ಕರ್ನಾಟಕ

karnataka

ಕೆ.ಜಿ ಹಳ್ಳಿ‌ ಘಟನೆ ಹಿಂದೆ ರಾಜಕೀಯ ಹುನ್ನಾರ ಇದೆ: ನಳಿನ್ ಕುಮಾರ್ ಕಟೀಲ್

By

Published : Aug 12, 2020, 12:12 PM IST

Updated : Aug 12, 2020, 12:36 PM IST

ಕೆಲವರು ಅರಾಜಕತೆ ಸೃಷ್ಟಿಸಿ ರಾಜಕೀಯ ಲಾಭ ಪಡೆಯಬೇಕು ಎಂಬ ಹುನ್ನಾರದಲ್ಲಿದ್ದಾರೆ. ‌ಇದರ ಹಿಂದೆ ಕಾಣದ ಶಕ್ತಿಗಳ ‌ಕೈವಾಡವಿದೆ.‌ ಕೂಡಲೇ ರಾಜ್ಯ ಸರ್ಕಾರ ತನಿಖೆ ನಡೆಸಬೇಕು ಎಂದು ನಳಿನ್​ ಕುಮಾರ್​ ಕಟೀಲ್​ ಹೇಳಿದರು.

nalin kumar katil talk about kg halli issue
ಕೆಜೆ ಹಳ್ಳಿ‌ ಘಟನೆ ಹಿಂದೆ ರಾಜಕೀಯ ಹುನ್ನಾರ ಇದೆ: ನಳಿನ್ ಕುಮಾರ್ ಕಟೀಲ್

ಹುಬ್ಬಳ್ಳಿ:ಕೆ.ಜಿ ಹಳ್ಳಿ‌ ಘಟನೆ ಹಿಂದೆ ರಾಜಕೀಯ ಹುನ್ನಾರ ಇದೆ. ಇಂತಹ ಘಟನೆಗಳು ನಡೆಯದಂತೆ ರಾಜ್ಯ ಸರ್ಕಾರ ನೋಡಿಕೊಳ್ಳುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್​ ಕಟೀಲ್ ಹೇಳಿದರು.

ಕೆ.ಜಿ ಹಳ್ಳಿ‌ ಘಟನೆ ಹಿಂದೆ ರಾಜಕೀಯ ಹುನ್ನಾರ ಇದೆ: ನಳಿನ್ ಕುಮಾರ್ ಕಟೀಲ್

ನಗರದಲ್ಲಿಂದು ಮಾತನಾಡಿದ ಅವರು, ಧರ್ಮದ ಹೆಸರಿನಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡುವುದು ಖಂಡನೀಯವಾಗಿದೆ. ಪೊಲೀಸ್ ಇಲಾಖೆ ಸಾಕಷ್ಟು ಕ್ರಮ‌ ಕೈಗೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ಕೆಲವರು ಅರಾಜಕತೆ ಸೃಷ್ಟಿಸಿ ರಾಜಕೀಯ ಲಾಭ ಪಡೆಯಬೇಕು ಎಂಬ ಹುನ್ನಾರದಲ್ಲಿದ್ದಾರೆ. ‌ಇದರ ಹಿಂದೆ ಕಾಣದ ಶಕ್ತಿಗಳ ‌ಕೈವಾಡವಿದೆ.‌ ಕೂಡಲೇ ರಾಜ್ಯ ಸರ್ಕಾರ ತನಿಖೆ ನಡೆಸಬೇಕು ಎಂದರು.

Last Updated : Aug 12, 2020, 12:36 PM IST

ABOUT THE AUTHOR

...view details