ಕರ್ನಾಟಕ

karnataka

By

Published : Aug 15, 2021, 10:13 PM IST

ETV Bharat / city

ಕಲಘಟಗಿಯಲ್ಲಿ ಅಡುಗೆ ಅನಿಲ ಸಿಲಿಂಡರ್ ಸ್ಪೋಟ : ರೈತ ಸಾವು

ಸಿಲಿಂಡರ್ ಸ್ಫೋಟದಿಂದ ಮನೆ ಹೆಂಚುಗಳು ಹಾರಿ ಹೋಗಿವೆ. ಮನೆಯಲ್ಲಿನ ವಸ್ತುಗಳು ಸಹ ಹಾನಿಯಾಗಿವೆ. ಅಲ್ಲದೇ ಮನೆ ಹೊರಗಡೆ ನಿಂತಿದ್ದ ಬಾಲಕಿ ತಲೆ ಮೇಲೆ ಹೆಂಚುಗಳು ಬಿದ್ದು ಸಣ್ಣಪುಟ್ಟ ಗಾಯವಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ..

explosion of cooking gas cylinder
ಅಡುಗೆ ಅನಿಲ ಸಿಲಿಂಡರ್ ಸ್ಪೋಟ

ಕಲಘಟಗಿ/ಹುಬ್ಬಳ್ಳಿ :ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು ರೈತನೋರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ತಾಲೂಕಿನ ತಬಕದಹೊನ್ನಳ್ಳಿ ಗ್ರಾಮದಲ್ಲಿ ನಡೆದಿದೆ. ಯಲ್ಲಪ್ಪ (35) ಎಂಬಾತ ಮೃತ ರೈತ. ಹೊಲಕ್ಕೆ ಹೋಗುವ ಬರದಲ್ಲಿ ರೈತ ಯಲ್ಲಪ್ಪ ಟೀ ಮಾಡಿಕೊಳ್ಳುವ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ.

ಕಲಘಟಗಿಯಲ್ಲಿ ಅಡುಗೆ ಅನಿಲ ಸಿಲಿಂಡರ್ ಸ್ಫೋಟ

ಸಿಲಿಂಡರ್ ಸ್ಫೋಟದಿಂದ ಮನೆ ಹೆಂಚುಗಳು ಹಾರಿ ಹೋಗಿವೆ. ಮನೆಯಲ್ಲಿನ ವಸ್ತುಗಳು ಸಹ ಹಾನಿಯಾಗಿವೆ. ಅಲ್ಲದೇ ಮನೆ ಹೊರಗಡೆ ನಿಂತಿದ್ದ ಬಾಲಕಿ ತಲೆ ಮೇಲೆ ಹೆಂಚುಗಳು ಬಿದ್ದು ಸಣ್ಣಪುಟ್ಟ ಗಾಯವಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಯಲ್ಲಪ್ಪ ಮೃತ ರೈತ

ಘಟನಾ ಸ್ಥಳಕ್ಕೆ ಕಲಘಟಗಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details