ಕರ್ನಾಟಕ

karnataka

By

Published : Jan 22, 2020, 7:26 PM IST

Updated : Jan 22, 2020, 8:55 PM IST

ETV Bharat / city

ಲಿವರ್​ ಕಸಿ ಯಶಸ್ವಿ...ವ್ಯಕ್ತಿಗೆ ಪುನರ್ಜನ್ಮ ನೀಡಿದ ವೈದ್ಯರು

ಪಿತ್ತಜನಕಾಂಗದ ಜೀವಂತ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ರೋಗಿ ಅಶೋಕ್​ ಕುಮಾರ್​ ಎಂಬವರಿಗೆ ಅಪೋಲೋ ಆಸ್ಪತ್ರೆಯ ವೈದ್ಯರು ಮರು ಜನ್ಮ ನೀಡಿದ್ದಾರೆ.

liver-transplant-surgery-successful
ಚಿಕಿತ್ಸೆ ಪಡೆದ ಅಶೋಕ್ ಕುಮಾರ್​​

ಹುಬ್ಬಳ್ಳಿ: ಪಿತ್ತಜನಕಾಂಗದ ಜೀವಂತ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ರೋಗಿಗೆ ಅಪೋಲೋ ಆಸ್ಪತ್ರೆಯ ವೈದ್ಯರು ಮರು ಜನ್ಮ ನೀಡಿದ್ದಾರೆ. ಈ ಮೂಲಕ ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವ ಅಪೋಲೋ ಆಸ್ಪತ್ರೆಯ ವೈದ್ಯರು ಆರೋಗ್ಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ್ದಾರೆ.

ಶಸ್ತ್ರಚಿಕಿತ್ಸೆಗೊಳಗಾದ ಉಮಾ ಮತ್ತು ಅಶೋಕ ದಂಪತಿ, ವೈದ್ಯ ಸಂಜಯ್ ಗೋವಿಲ್ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು.

ಈ ವೇಳೆ ಸಂಜಯ್ ಗೋವಿಲ್​ ಮಾತನಾಡಿ, ರೈಲ್ವೆ ವಲಯದಲ್ಲಿ ಕೆಲಸ ಮಾಡುತ್ತಿರುವ ನೌಕರ ಅಶೋಕ್ ಕುಮಾರ್​​ಗೆ (53) 2015ರಲ್ಲಿ ಕಾಮಾಲೆ ರೋಗಕ್ಕೆ ತುತ್ತಾಗಿದ್ದರು. ಈ ವೇಳೆ ಪರೀಕ್ಷೆಗೊಳಪಡಿಸಿದಾಗ ಅವರಿಗೆ ಯಕೃತ್​​​ನಲ್ಲಿ ಸಮಸ್ಯೆ ಇರುವುದು ಪತ್ತೆಯಾಗಿತ್ತು ಎಂದರು.

ಚಿಕಿತ್ಸೆ ಪಡೆದ ಅಶೋಕ್​, ವೈದ್ಯ ಸಂಜಯ್ ಗೋವಿಲ್ ಜಂಟಿ ಪತ್ರಿಕಾಗೋಷ್ಠಿ

ಹೀಗಾಗಿ, 2016ರಲ್ಲೇ ಯಶಸ್ವಿಯಾಗಿ ಯಕೃತ್​ ಕಸಿ ಮಾಡಲಾಯಿತು. ಅಂದು ಅಂಗಾಗ ಕಸಿ ಮಾಡಿದ ಬಳಿಕ ಏನಾಗುತ್ತದೋ ಎಂಬ ಆತಂಕ ನಮ್ಮಲ್ಲಿತ್ತು. ಚಿಕಿತ್ಸೆ ಪಡೆದು 4 ವರ್ಷಗಳಾಗಿದೆ. ಈಗವರು ಆರೋಗ್ಯದಿಂದಿದ್ದು, ಕೆಲಸಕ್ಕೆ ಹೋಗುತ್ತಿದ್ದಾರೆ ಎಂದು ವೈದ್ಯ ದಂಪತಿ ಸಂತಸ ವ್ಯಕ್ತಪಡಿಸಿದರು.

ಅಶೋಕ್​ ಕುಮಾರ್​ ಮಾತನಾಡಿ, ಚಿಕಿತ್ಸೆ ಪಡೆದು ಆಸ್ಪತ್ರೆಯಲ್ಲೇ ಮೂರು ವಾರಗಳಿದ್ದೆ. ಈ ಸಂದರ್ಭದಲ್ಲಿ ಸರಳ ವ್ಯಾಯಾಮ ಮಾಡುತ್ತಿದ್ದೆ. ವೈದ್ಯರ ಸಲಹೆ ಮೇರೆಗೆ ಕಡ್ಡಾಯವಾಗಿ ಔಷಧಗಳನ್ನು ಸೇವಿಸುತ್ತಿದ್ದೆ. ಪ್ರಸ್ತುತ ಎಲ್ಲರಂತೆ ಆರೋಗ್ಯಕರ ಜೀವನ ನಡೆಸುತ್ತಿದ್ದೇನೆ. ನನಗೆ ಪುನರ್ಜನ್ಮ ನೀಡಿದ ವೈದ್ಯರಿಗೆ ಧನ್ಯವಾದ ಎಂದರು.

Last Updated : Jan 22, 2020, 8:55 PM IST

ABOUT THE AUTHOR

...view details