ಕರ್ನಾಟಕ

karnataka

ETV Bharat / city

ರಸ್ತೆ ಬದಿಯ ಪೈಪ್​ಲೈನ್​​​ ಒಡೆದು ಎತ್ತರಕ್ಕೆ ಚಿಮ್ಮಿದ ನೀರಿನಲ್ಲೇ ಸಾಗಿದ ಸಾರಿಗೆ ಬಸ್ - water come out from pipeline at dharawada

ಸವದತ್ತಿ ರಸ್ತೆ ಬದಿಯ ಪೈಪ್​​ಲೈನ್ ಒಡೆದು ಭಾರಿ ಪ್ರಮಾಣದ ನೀರು ಎತ್ತರಕ್ಕೆ ಚಿಮ್ಮಿದೆ. ಆ ನೀರಿನ ನಡುವೆಯೇ ಕೆಎಸ್‌ಆರ್‌ಟಿಸಿ ಬಸ್ ಸಾಗಿ ಬಂದಿದೆ..

ksrtc bus passes via water which come out from pipeline at dharawada
ರಸ್ತೆ ಬದಿಯ ಪೈಪಲೈನ್ ಹೊಡೆದು ಮುಗಿಲೆತ್ತರಕ್ಕೆ ಚಿಮ್ಮಿದ ನೀರಿನಲ್ಲೇ ಸಾಗಿದ ಸಾರಿಗೆ ಬಸ್

By

Published : Jan 29, 2022, 1:39 PM IST

ಧಾರವಾಡ: ಸವದತ್ತಿ ರಸ್ತೆ ಬದಿಯ ಪೈಪ್​​ಲೈನ್ ಒಡೆದು ಭಾರಿ ಪ್ರಮಾಣದ ನೀರು ಪೋಲಾಗಿದೆ. ನೀರು ಎತ್ತರಕ್ಕೆ ಚಿಮ್ಮುತ್ತಿರೋದನ್ನು ಕಂಡು ವಾಹನ ಸವಾರರು ರಸ್ತೆ ದಾಟಲು ಪರದಾಡಬೇಕಾಯಿತು.

ರಸ್ತೆ ಬದಿಯ ಪೈಪ್​ಲೈನ್​​​ ಒಡೆದು ಎತ್ತರಕ್ಕೆ ಚಿಮ್ಮಿದ ನೀರಿನಲ್ಲೇ ಸಾಗಿದ ಸಾರಿಗೆ ಬಸ್..

ಆದ್ರೆ, ಭಾರಿ ಪ್ರಮಾಣದಲ್ಲಿ ಚಿಮ್ಮುತ್ತಿರುವ ನೀರಿನ ನಡುವೆ ಬಸ್ ಚಲಾಯಿಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕೆಎಸ್‌ಆರ್‌ಟಿಸಿ ಬಸ್ ಚಾಲಕ ಎತ್ತರಕ್ಕೆ ಚಿಮ್ಮುತ್ತಿದ್ದ ನೀರಿನಲ್ಲೇ ಸಾಗಿ ಬಂದಿದ್ದು, ಚಾಲಕನ ಧೈರ್ಯಕ್ಕೆ ಸ್ಥಳೀಯರು ಜೈ ಎಂದಿದ್ದಾರೆ.

ಇದನ್ನೂ ಓದಿ:ಉತ್ತರಕನ್ನಡ: ನದಿ ಪಾತ್ರದ ಜನರಿಗೆ ಪರ್ಯಾಯವಾಗಿ ಬೇರೆಡೆ ಮನೆ ಕಟ್ಟಿಕೊಡುವಂತೆ ಶಿರೂರು ಮಂದಿ ಒತ್ತಾಯ

ಈ ದೃಶ್ಯವನ್ನು ಸಾರ್ವಜನಿಕರು ತಮ್ಮ ‌ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.‌

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details