ಹುಬ್ಬಳ್ಳಿ: ಕೊರೊನಾ ಹಿನ್ನೆಲೆಯಲ್ಲಿ ಸರ್ವಧರ್ಮ ಆಧ್ಯಾತ್ಮಿಕ ಗುರು ಮುಖ್ದೂಮ್ ಆಶ್ರಫ್ ಸಿಮ್ ನಾನಿಯವರ 634 ನೇ ಉರಸು ಹಬ್ಬವನ್ನು ಸರಳವಾಗಿ ಆಚರಣೆ ಮಾಡಲು ನಿರ್ಧರಿಲಾಗಿದೆ ಎಂದು ಮಖ್ದೂಮ್ ಅಶ್ರಫ್ ಅಕಾಡೆಮಿ ಸದಸ್ಯ ಹಾಫಿಜ ಶಾರಿಕ್ ಅಹ್ಮದ್ ಪಟೇಲ್ ಹೇಳಿದರು.
ಗುರು ಮುಖ್ದೂಮ್ ಆಶ್ರಫ್ ಸಿಮ್ ನಾನಿಯವರ ಉರುಸ್ ಸರಳ ಆಚರಣೆ - Makdoum Ashraf Academy a member Hafiz Sharik Ahmed Patel
ಕೊರೊನಾ ಹಿನ್ನೆಲೆ ಸೂಫಿ ಸಂತ ಸರ್ವಧರ್ಮ ಆಧ್ಯಾತ್ಮಿಕ ಗುರು ಹಜರತ್ ಸುಲ್ತಾನ್ ಅರ್ಶಪ್ ಜಹಾಂಗೀರ್ ಸಿಮ್ ನಾನಿ ಅಲೈವರ ದರ್ಗಾ ಉರುಸುನ್ನು ಸರಳವಾಗಿ ಆಚರಣೆ ಮಾಡಲು ನಿರ್ಧರಿಸಲಾಗಿದೆ.
![ಗುರು ಮುಖ್ದೂಮ್ ಆಶ್ರಫ್ ಸಿಮ್ ನಾನಿಯವರ ಉರುಸ್ ಸರಳ ಆಚರಣೆ Hubli](https://etvbharatimages.akamaized.net/etvbharat/prod-images/768-512-8880130-211-8880130-1600678504043.jpg)
ಗುರು ಮುಖ್ದೂಮ್ ಆಶ್ರಫ್ ಸಿಮ್ ನಾನಿಯವರ ಉರುಸು ಸರಳ ಆಚರಣೆ..
ಮಖ್ದೂಮ್ ಅಶ್ರಫ್ ಅಕಾಡೆಮಿ ಸದಸ್ಯ ಹಾಫಿಜ ಶಾರಿಕ್ ಅಹ್ಮದ್ ಪಟೇಲ್
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಉತ್ತರ ಪ್ರದೇಶ ಅಂಬೇಡ್ಕರ್ ನಗರ ಜಿಲ್ಲೆಯ ಕಿಛೊಛಾ ಪ್ರದೇಶದಲ್ಲಿರುವ ಸೂಫಿ ಸಂತ ಸರ್ವಧರ್ಮ ಆಧ್ಯಾತ್ಮಿಕ ಗುರು ಹಜರತ್ ಸುಲ್ತಾನ್ ಅರ್ಶಪ್ ಜಹಾಂಗೀರ್ ಸಿಮ್ ನಾನಿ ಅಲೈವರ ದರ್ಗಾ ಉರಸುನ್ನು ಈ ಬಾರಿ ಕೊರೊನಾ ಇರುವುದರಿಂದ ಅತಿ ಸರಳವಾಗಿ ಆಚರಣೆ ಮಾಡಲಾಗುತ್ತಿದೆ.
ಈ ದರ್ಗಾಕ್ಕೆ ಎಲ್ಲಾ ಸಮಾಜದವರು ಆಗಮಿಸುತ್ತಾರೆ. ಆದ್ದರಿಂದ ಎಲ್ಲಾ ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿದರು. ಇದೆ ಸಂದರ್ಭದಲ್ಲಿ ಅವರ ಆತ್ಮಚರಿತ್ರೆ ಹೊಂದಿರುವ ಪುಸ್ತಕವನ್ನು ಬಿಡುಗಡೆ ಮಾಡಿದರು.