ಹುಬ್ಬಳ್ಳಿ: ಡಿ ಬಾಸ್ ಅಭಿನಯದ ಕುರುಕ್ಷೇತ್ರ ಚಿತ್ರ ಈಗಾಗಲೇ ಬಿಡುಗಡೆಯಾಗಿದ್ದು, ಭೀಕರ ಪ್ರವಾಹ ಹಾಗೂ ಕುಂಭದ್ರೋಣ ಮಳೆಯ ಮಧ್ಯೆಯು ಹುಬ್ಬಳ್ಳಿಯಲ್ಲಿ ಕುರುಕ್ಷೇತ್ರ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಹುಬ್ಬಳ್ಳಿ: ಭೀಕರ ಪ್ರವಾಹದ ನಡುವೆಯೂ 'ಕುರುಕ್ಷೇತ್ರ'ಕ್ಕೆ ಉತ್ತಮ ಪ್ರತಿಕ್ರಿಯೆ - ಡಿ ಬಾಸ್
ಡಿ ಬಾಸ್ ಅಭಿನಯದ ಕುರುಕ್ಷೇತ್ರ ಚಿತ್ರ ಈಗಾಗಲೇ ಬಿಡುಗಡೆಯಾಗಿದ್ದು, ಭೀಕರ ಪ್ರವಾಹ ಹಾಗೂ ಕುಂಭದ್ರೋಣ ಮಳೆಯ ಮಧ್ಯೆಯು ಹುಬ್ಬಳ್ಳಿಯಲ್ಲಿ ಕುರುಕ್ಷೇತ್ರ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

'ಕುರುಕ್ಷೇತ್ರ'ಕ್ಕೆ ಉತ್ತಮ ಪ್ರತಿಕ್ರಿಯೆ
'ಕುರುಕ್ಷೇತ್ರ'ಕ್ಕೆ ಉತ್ತಮ ಪ್ರತಿಕ್ರಿಯೆ
ನಗರದ ಅಪ್ಸರಾ ಮಂದಿರದಲ್ಲಿ ಚಿತ್ರ ಬಿಡುಗಡೆಯಾಗಿದ್ದು, ದರ್ಶನ್ ಹಾಗೂ ನಿಖಿಲ್ ಅಭಿಮಾನಿಗಳು ಬೆಳಗ್ಗೆಯಿಂದಲೇ ಕ್ಯೂನಲ್ಲಿ ನಿಂತು ಟಿಕೆಟ್ ಪಡೆದು ಚಿತ್ರ ವೀಕ್ಷಣೆ ಮಾಡಿದರು. ಯುವಕರಿಂದ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಅದರಲ್ಲೂ ಯುವರಾಜ್ ನಿಖಿಲ್ ಕುಮಾರಸ್ವಾಮಿ ಅಭಿನಯಕ್ಕೆ ಯುವಕರು ಫಿದಾ ಆಗಿದ್ದಾರೆ.
ಇನ್ನು ಮಳೆಯಲ್ಲೇ ಅಪ್ಸರಾ ಚಿತ್ರ ಮಂದಿರದ ಮುಂದೆ ಸಿಹಿ ಹಂಚಿ, ಪಟಾಕಿ ಸಿಡಿಸಿ ಅಭಿಮಾನಿಗಳು ಸಂಭ್ರಮಿಸಿದರು.