ಕರ್ನಾಟಕ

karnataka

ETV Bharat / city

ಸಾಲಬಾಧೆ: ಡೆತ್‌ನೋಟ್ ಬರೆದಿಟ್ಟು ಧಾರವಾಡದ ರೈತ ಆತ್ಮಹತ್ಯೆ - Dharwad crime latest news

ಸಾಲಬಾಧೆ ತಾಳಲಾರದೇ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ತಡಹಾಳ ಗ್ರಾಮದ ರೈತನೊಬ್ಬ ಮನನೊಂದು, ಡೆತ್‌ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ರೈತ ಆತ್ಮಹತ್ಯೆ

By

Published : Oct 15, 2019, 5:43 PM IST

ಧಾರವಾಡ: ಸಾಲಬಾಧೆ ತಾಳಲಾರದೆ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ನವಲಗುಂದ ತಾಲೂಕಿನ ತಡಹಾಳ ಗ್ರಾಮದಲ್ಲಿ ನಡೆದಿದೆ.

ತಡಹಾಳ ಗ್ರಾಮದ ಉಮೇಶ ಬಳೂಲಿ (46), ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ರೈತ. ಇವರು ಎಸ್​​ಬಿಐ, ಕೆವಿಜಿ ಬ್ಯಾಂಕ್, ಸ್ಥಳೀಯ ಸೊಸೈಟಿ ಸೇರಿ ಇತರೆಡೆ 15 ಲಕ್ಷ ರೂ. ಸಾಲ‌ ಮಾಡಿದ್ದರು. ಸಾಲದ ಬಗ್ಗೆ ಹೆಂಡತಿ ಪದೇ ಪದೆ ಕೇಳಿದ್ದರಿಂದ ಮನನೊಂದು ಡೆತ್‌ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ.

ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ABOUT THE AUTHOR

...view details