ಕರ್ನಾಟಕ

karnataka

ETV Bharat / city

ಯಾರ ಕೈಗೂ ಪೆಟ್ರೋಲ್, ಡಿಸೇಲ್ ಕೊಡಬೇಡಿ: ಹು-ಧಾ ಪೊಲೀಸ್ ಆಯುಕ್ತರಿಂದ ಕಟ್ಟುನಿಟ್ಟಿನ ಸೂಚನೆ - caa news

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಇಂದು ಹುಬಳ್ಳಿಯಲ್ಲಿ ಪ್ರತಿಭಟನೆಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಪೆಟ್ರೋಲ್ ಬಂಕ್​ಗಳಿಗೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

petrolbunk
ಯಾರ ಕೈಗೂ ಪೆಟ್ರೋಲ್, ಡಿಸೇಲ್ ಕೊಡಬೇಡಿ

By

Published : Dec 24, 2019, 11:56 AM IST

ಹುಬ್ಬಳ್ಳಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕರೆ ನೀಡಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ಯಾರಿಗೂ ಖುಲ್ಲಾ ಪೆಟ್ರೋಲ್, ಡಿಸೇಲ್ ನೀಡದಂತೆ ನಗರದ ಪೆಟ್ರೋಲ್ ಬಂಕಗಳಿಗೆ ಹು-ಧಾ ಮಹಾನಗರ ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ.

ಹು-ಧಾ ಪೊಲೀಸ್ ಆಯುಕ್ತರಿಂದ ಕಟ್ಟುನಿಟ್ಟಿನ ಸೂಚನೆ

ಸಿಎಎ ವಿರುದ್ಧ ಇಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ಯಾವುದೇ ವ್ಯಕ್ತಿಗೂ ಖುಲ್ಲಾ/ಲೂಸ್ ಡಿಸೇಲ್ ಹಾಗೂ ಪೆಟ್ರೋಲ್ ನೀಡಬಾರದು. ಒಂದು ವೇಳೆ ವಾಹನಕ್ಕೆ ಹೊರತುಪಡಿಸಿ ಬೇರೆ ರೀತಿಯಲ್ಲಿ ಪೆಟ್ರೋಲ್ ‌ಹಾಗೂ ಡೀಸೆಲ್ ನೀಡಿದ್ದು ಕಂಡು ಬಂದ್ರೆ ಅಂತ ಪೆಟ್ರೋಲ್ ಬಂಕ್​​ಗಳ‌ ಮೇಲೆ ಕಾನೂನು ಕ್ರಮ ಜರುಗಿಸಲಾಗುವದು ಎಂದು ಆಯುಕ್ತರು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.‌

ಪ್ರತಿಭಟನೆ ಹಿನ್ನೆಲೆಯಲ್ಲಿ ಹು-ಧಾ ಮಹಾನಗರದ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಂದೋಬಸ್ತ್ ಆಯೋಜಿಸಲಾಗಿದೆ.

ABOUT THE AUTHOR

...view details