ಕರ್ನಾಟಕ

karnataka

By

Published : Aug 3, 2020, 4:55 PM IST

ETV Bharat / city

ಆಶಾ ಕಾರ್ಯಕರ್ತರಿಗೆ ಪ್ರೋತ್ಸಾಹಧನ ವಿತರಣೆ

ಕೊವೀಡ್ -19 ಹಿನ್ನೆಲೆ ಸೇವೆ ಸಲ್ಲಿಸುತ್ತಿರುವ ಆಶಾಗಳಿಗೆ ಧಾರವಾಡ ಕೆಸಿಸಿ ಬ್ಯಾಂಕ್, ಸಹಕಾರ ಇಲಾಖೆ, ಪ್ರಾಥಮಿಕ ಕೃಷಿ ‌ಪತ್ತಿನ ಸಹಕಾರ ಸಂಘ ಹಾಗೂ ಟಿಎಪಿಸಿಎಂಎಸ್​ಗಳ ಸಹಕಾರದೊಂದಿಗೆ ಪ್ರೋತ್ಸಾಹಧನ ನೀಡಲಾಯಿತು.

ಕೆಸಿಸಿ ಬ್ಯಾಂಕ್, ಆಶಾಗಳಿಗೆ ಪ್ರೋತ್ಸಾಹಧನ ವಿತರಣೆ,Distribution of Incentives to Asha by KCC Bank
Distribution of Incentives to Asha by KCC Bank

ಕಲಘಟಗಿ: ಕೆಸಿಸಿ ಬ್ಯಾಂಕ್, ಸಹಕಾರ ಇಲಾಖೆ, ಪ್ರಾಥಮಿಕ ಕೃಷಿ ‌ಪತ್ತಿನ ಸಹಕಾರ ಸಂಘ ಹಾಗೂ ಟಿಎಪಿಸಿಎಂಎಸ್ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.

ಕೆಸಿಸಿ‌ ಬ್ಯಾಂಕ್ ನಿರ್ದೇಶಕ ಮಂಜುನಾಥ ‌ಮುರಳ್ಳಿ ಕಾರ್ಯಕ್ರಮ ‌ಉದ್ಘಾಟಿಸಿ ಮಾತನಾಡಿ, ಕೊವೀಡ್ -19 ಮಹಾಮಾರಿಯ ವಿರುದ್ಧ ಸೇವೆ ಸಲ್ಲಿಸುತ್ತಿರುವ ಆಶಾಗಳಿಗೆ ಧಾರವಾಡ ಕೆಸಿಸಿ ಬ್ಯಾಂಕ್, ಸಹಕಾರ ಇಲಾಖೆ, ಪ್ರಾಥಮಿಕ ಕೃಷಿ ‌ಪತ್ತಿನ ಸಹಕಾರ ಸಂಘ ಹಾಗೂ ಟಿಎಪಿಸಿಎಂಎಸ್​ಗಳ ಸಹಕಾರದೊಂದಿಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್​ ಮುಖಂಡ ಎಸ್ ಆರ್ ಪಾಟೀಲ್ ಮಾತನಾಡಿ, ಸಂಕಷ್ಟದ ಈ ಸಮಯದಲ್ಲಿ ಆಶಾಗಳ ಸೇವೆ ಶ್ಲಾಘನೀಯವಾಗಿದೆ. ಸರ್ಕಾರ ಆಶಾಗಳಿಗೆ ವೇತನ ಹೆಚ್ಚಳ ಮಾಡಿಲ್ಲ, ಹಾಗಾಗಿ ಅವರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಲಿಂಗರಡ್ಡಿ, ಸಿಡಿಒ ಎಸ್ ಐ ಹಂಚಿನಾಳ, ಕಲ್ಲಪ್ಪ ಅರಸಿಣಗೇರಿ, ಶಂಕ್ರಣ್ಣ ರಾಯನಾಳ ಇದ್ದರು.

ABOUT THE AUTHOR

...view details