ಕರ್ನಾಟಕ

karnataka

ETV Bharat / city

ಕಾರ್ಮಿಕ ದಿನ : ನೌಗರಾಜ ಗೌರಿ ದಂಪತಿಯಿಂದ ಕೊರೊನಾ ವಾರಿಯರ್ಸ್‌ಗೆ ದಿನಸಿ ಕಿಟ್​ ವಿತರಣೆ.. - ಹುಬ್ಬಳ್ಳಿ ದಿನಸಿ ಕಿಟ್​ ವಿತರಣೆ ಸುದ್ದಿ

ಕಳೆದೊಂದು ತಿಂಗಳಿನಿಂದ ನಾಗರೌಜ ಗೌರಿ ದಂಪತಿ ನಿತ್ಯ ಹಸಿದವರ ಹೊಟ್ಟೆ ತುಂಬಿಸುತ್ತಿದೆ. ದೀಪಾ ಗೌರಿ ಮಹಾನಗರ ಪಾಲಿಕೆ ಸದಸ್ಯೆ ಕೂಡ ಆಗಿದ್ದಾರೆ. ಈ ದಂಪತಿಯ ಈ ಸಮಾಜ ಕಾರ್ಯವನ್ನ ಸಾಕಷ್ಟು ಜನ ಶ್ಲಾಘಿಸಿದ್ದಾರೆ.

Couple distributing groceries to Corona Warriors as part of Labor Day
ಕಾರ್ಮಿಕ ದಿನಾಚರಣೆ ಅಂಗವಾಗಿ ಕೊರೊನಾ ವಾರಿಯರ್ಸ್‌ಗೆ ದಿನಸಿ ಕಿಟ್​ ವಿತರಿಸಿದ ದಂಪತಿ

By

Published : May 1, 2020, 5:49 PM IST

ಹುಬ್ಬಳ್ಳಿ:ಕೊರೊನಾ ವೈರಸ್ ಭೀತಿಯಿಂದ ಲಾಕ್​ಡೌನ್ ಘೋಷಣೆಯಾಗಿದ್ದು,ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ, ಪೊಲೀಸ್​ ಸಿಬ್ಬಂದಿಗೆ ಪತಿ ನಾಗರಾಜ ಗೌರಿ ಮತ್ತು ಪತ್ನಿ ದೀಪಾ ದಿನಸಿ ಕಿಟ್ ವಿತರಣೆ ಮಾಡಿ,ಅಭಿನಂದಿಸಿದರು.

ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಪೌರಕಾರ್ಮಿಕರ ಶ್ರಮ ನಿಜಕ್ಕೂ ಶ್ಲಾಘನೀಯ. ಇಂತಹ ಸಮಯದಲ್ಲಿಯೂ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯ.

ಕಾರ್ಮಿಕ ದಿನಾಚರಣೆ ಅಂಗವಾಗಿ ಕೊರೊನಾ ವಾರಿಯರ್ಸ್‌ಗೆ ದಿನಸಿ ಕಿಟ್​ ವಿತರಿಸಿದ ಗೌರಿ ದಂಪತಿ..

ಲಾಕ್​ಡೌನ್ ಸಂದರ್ಭದಲ್ಲಿ ಹು-ಧಾ ಮಹಾನಗರದ ಸ್ವಚ್ಛತೆಗೆ ಶ್ರಮಿಸುತ್ತಿರುವ ಪೌರಕಾರ್ಮಿಕರಿಗೂ ಅಭಿನಂದನೆ ಸಲ್ಲಿಸುವ ಸದುದ್ದೇಶದಿಂದ ಈ ಕಾರ್ಯವನ್ನು ಕೈಗೊಳ್ಳಲಾಗಿತ್ತು ಎಂದಿದ್ದಾರೆ. ಕಳೆದೊಂದು ತಿಂಗಳಿನಿಂದ ನಾಗರೌಜ ಗೌರಿ ದಂಪತಿ ನಿತ್ಯ ಹಸಿದವರ ಹೊಟ್ಟೆ ತುಂಬಿಸುತ್ತಿದೆ. ದೀಪಾ ಗೌರಿ ಮಹಾನಗರ ಪಾಲಿಕೆ ಸದಸ್ಯೆ ಕೂಡ ಆಗಿದ್ದಾರೆ. ಈ ದಂಪತಿಯ ಈ ಸಮಾಜ ಕಾರ್ಯವನ್ನ ಸಾಕಷ್ಟು ಜನ ಶ್ಲಾಘಿಸಿದ್ದಾರೆ.

ABOUT THE AUTHOR

...view details