ಕರ್ನಾಟಕ

karnataka

ETV Bharat / city

ಸ್ವಂತ ವಾಹನದಲ್ಲಿ ಮನೆ ಮನೆಗೆ ಹೋಗಿ ವ್ಯಾಕ್ಸಿನ್​​: ಹುಬ್ಬಳಿಯ ಯುವಕರ ತಂಡಕ್ಕೆ ವೈದ್ಯರ ಸಾಥ್ - ಸ್ಲಂಗಳಿಗೆ ತೆರಳಿ ಕೋವಿಡ್​​ ಲಸಿಕೆ

ವಾಣಿಜ್ಯ ನಗರಿ ಹುಬ್ಬಳ್ಳಿ ಚಿಟಗುಪ್ಪಿ ಆಸ್ಪತ್ರೆಯಿಂದ ವ್ಯಾಕ್ಸಿನ್ ತೆಗೆದುಕೊಂಡು, ಸ್ಲಂ ಗಳಿಗೆ ಹೋಗಿ ಲಸಿಕೆ ನೀಡುವ ಮಹತ್ವದ ಕಾರ್ಯದಲ್ಲಿ ಯುವಕರ ಗುಂಪೊಂದು ತೊಡಗಿಸಿಕೊಂಡಿದೆ.

Hubli
ಹುಬ್ಬಳ್ಳಿ

By

Published : Dec 15, 2021, 3:11 PM IST

ಹುಬ್ಬಳ್ಳಿ: ಕೊರೊನಾ ಅಟ್ಟಹಾಸ ಕಡಿಮೆಯಾಯಿತು ಎಂದು ನಿಟ್ಟುಸಿರು ಬಿಡುತ್ತಿರುವ ಬೆನ್ನಲ್ಲೇ ರೂಪಾಂತರಿ ಒಮ್ರಿಕಾನ್ ಜನರಲ್ಲಿ ಆತಂಕವನ್ನುಂಟು ಮಾಡುತ್ತಿದೆ. ಈ ನಡುವೆ ವಾಣಿಜ್ಯ ನಗರಿ ಹುಬ್ಬಳ್ಳಿಯ ಯುವಕರ ತಂಡವೊಂದು, ತಮ್ಮ ಸ್ವಂತ ವಾಹನವನ್ನು ತೆಗೆದುಕೊಂಡು ಮನೆ ಮನೆಗೆ ಹೋಗಿ ಲಸಿಕೆ ಹಾಕುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.

ಮನೆ ಮನೆಗೆ ಹೋಗಿ ವ್ಯಾಕ್ಸಿನ್​​: ಹುಬ್ಬಳಿಯ ಯುವಕರ ತಂಡಕ್ಕೆ ವೈದ್ಯರು ಸಾಥ್

ಹುಬ್ಬಳ್ಳಿ ಚಿಟಗುಪ್ಪಿ ಆಸ್ಪತ್ರೆಯಿಂದ ವ್ಯಾಕ್ಸಿನ್ ತೆಗೆದುಕೊಂಡು, ಸ್ಲಂಗಳಿಗೆ ಹೋಗಿ ಲಸಿಕೆ ನೀಡುವ ಮಹತ್ವದ ಕಾರ್ಯದಲ್ಲಿ ಯುವಕರ ಗುಂಪೊಂದು ತೊಡಗಿದೆ. ಶ್ರೀಶೈಲ ಅಂಕಲಗಿ, ಮಲ್ಲಿಕಾರ್ಜುನ ಅಂಕಲಗಿ, ಮಂಜುನಾಥ ತರಂಗಿ ಹಾಗೂ ಕೃಷ್ಣ ಗೆಳೆಯರ ಬಳಗ ಇವರು, ಪ್ರತಿ ದಿನಕ್ಕೆ 150 ಕ್ಕೂ ಹೆಚ್ಚು ವ್ಯಾಕ್ಸಿನ್ ನೀಡಿ ಕೊರೊನಾ ಸೋಂಕು ತಡೆಗಟ್ಟಲು ಶ್ರಮಿಸುತ್ತಿದ್ದಾರೆ. ಪ್ರಮುಖವಾಗಿ ಸ್ಲಂ ಪ್ರದೇಶಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದು, ಇವರ ಕಾರ್ಯಕ್ಕೆ ಚಿಟಗುಪ್ಪಿ ಆಸ್ಪತ್ರೆ ವೈದ್ಯರು ಸಹ ಸಾಥ್ ನೀಡಿದ್ದಾರೆ.

ಸುಮಾರು 15 ದಿನಗಳಿಂದ ಶ್ರಮಿಸುತ್ತಿರುವ ಇವರ ಕಾರ್ಯ ವೈಖರಿಗೆ ಸಾರ್ವಜನಿಕರು ಸಹ ಮೆಚ್ಚುಗೆ ವ್ಯಕ್ತಪಡಿಸಿ, ಇವರಿಗೆ ಸಹಕಾರ ನೀಡುತ್ತಿದ್ದಾರೆ. ಮೊದಲಿಗೆ ಈ ಕಾರ್ಯಕ್ಕೆ ತಮ್ಮ ಸ್ವಂತ ಓಮಿನಿ ಬಳಸುತ್ತಿದ್ದರು. ಇವರ ಕಾರ್ಯಕ್ಕೆ ಮೆಚ್ಚಿ, ಚಿಟ್ಟಗುಪ್ಪಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶ್ರೀಧರ್ ದಂಡೆಪ್ಪನವರ ಅವರು ಜಿಲ್ಲಾಡಳಿತದಿಂದ ಒಂದು ವ್ಯಾಕ್ಸಿನ್ ವಾಹನ ನೀಡಿದ್ದಾರೆ. ಈ ವಾಹನದಲ್ಲಿ ಕುಳಿತುಕೊಳ್ಳುವ ವ್ಯವಸ್ಥೆಯಿದ್ದು, ರಸ್ತೆಯಲ್ಲಿ ಲಸಿಕೆ ಪಡೆಯುವುದರ ಬದಲು ವಾಹನದ ಒಳಗಡೆಯೇ ಕುಳಿತು ಲಸಿಕೆ ಪಡೆಯಬಹುದಾಗಿದೆ.

ಇದನ್ನೂ ಓದಿ:Telangana Omicron: ತೆಲಂಗಾಣದಲ್ಲಿ ಮೊದಲ ಬಾರಿಗೆ ಎರಡು ಒಮಿಕ್ರಾನ್ ಕೇಸ್ ಪತ್ತೆ!

ABOUT THE AUTHOR

...view details