ಕರ್ನಾಟಕ

karnataka

ಪಾಕಿಸ್ತಾನ ಜಿಂದಾಬಾದ್​ ಕೂಗಿದ ವಿದ್ಯಾರ್ಥಿಗಳು: ಪೊಲೀಸರಿಂದ ಕಾನೂನು ಸುವ್ಯವಸ್ಥೆ ‌ಕುರಿತು ಸಭೆ

By

Published : Feb 15, 2020, 11:30 PM IST

ಹುಬ್ಬಳ್ಳಿಯ ಕೆಎಲ್‌ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಾಶ್ಮೀರ ವಿದ್ಯಾರ್ಥಿಗಳು ಪಾಕಿಸ್ತಾನ‌ ಜಿಂದಾಬಾದ್ ಎಂದು ಘೋಷಣೆ ‌ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಸುವ್ಯವಸ್ಥೆ ‌ಕುರಿತಂತೆ ಸಭೆ ನಡೆಸಲಾಯಿತು.

Convention on law and order from police officers
ಪೊಲೀಸ್​ ಅಧಿಕಾರಿಗಳಿಂದ ಕಾನೂನು ಸುವ್ಯವಸ್ಥೆ ‌ಕುರಿತು ಸಭೆ

ಹುಬ್ಬಳ್ಳಿ: ನಗರದ ಕೆಎಲ್‌ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಾಶ್ಮೀರ ವಿದ್ಯಾರ್ಥಿಗಳು ಪಾಕಿಸ್ತಾನ‌ ಜಿಂದಾಬಾದ್ ಎಂದು ಘೋಷಣೆ ‌ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಾನೂನು ಸುವ್ಯವಸ್ಥೆ ‌ಕುರಿತಂತೆ ಸಭೆ ನಡೆಸಿದ್ದಾರೆ.

ನಗರದ ಗೋಕುಲ್ ರೋಡ ಪೊಲೀಸ್ ಠಾಣೆಯಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಆರ್.ದಿಲೀಪ್ ನೇತೃತ್ವದಲ್ಲಿ ಸಭೆ ನಡೆಯಿತು.

ಪೊಲೀಸ್​ ಅಧಿಕಾರಿಗಳ ಸಭೆ

ಸಭೆಯಲ್ಲಿ ಗುಪ್ತಚರ ವಿಭಾಗದ ಅಧಿಕಾರಿಗಳು ಸೇರಿದಂತೆ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು. ಹುಬ್ಬಳ್ಳಿ ಕೋಮು ಸೂಕ್ಷ್ಮ ನಗರವಾಗಿದ್ದು, ನಗರದಲ್ಲಿ ಬಂದೋಬಸ್ತ್ ಹಾಗೂ ಕಾನೂನು ಸುವ್ಯವಸ್ಥೆ, ದೇಶ‌ದ್ರೋಹ ಹಾಗೂ ಕೋಮು ಸೌಹಾರ್ಧ ಕದಡುವ ಪ್ರಕರಣ ಕುರಿತು ಮುಂಜಾಗ್ರತಾ ಕ್ರಮಗಳ ಕುರಿತು ಕೂಲಕಂಷ ಚರ್ಚೆ ನಡೆಸಲಾಯಿತು.

ABOUT THE AUTHOR

...view details