ಹುಬ್ಬಳ್ಳಿ:ಕುಂದಗೋಳ ಕ್ಷೇತ್ರಕ್ಕೆ ಒಳ್ಳೆದಾಗೋದಾದ್ರೆ ನನ್ನನ್ನ ಬಲಿ ಕೊಡಲಿ ಎಂದು ಬಿಜೆಪಿ ಶಾಸಕ ರೇಣುಕಾಚಾರ್ಯ ಹೇಳಿಕೆಗೆ ಸಚಿವ ಡಿ.ಕೆ.ಶಿವಕುಮಾರ್ ತೀರುಗೇಟು ನೀಡಿದರು.
ಕುಂದಗೋಳದಲ್ಲಿ ಮಾತನಾಡಿದ ಅವರು, ಕೋಣ ಬಲಿ ಕೊಡೋದು ಊರಿಗೆ ಒಳ್ಳೆಯದಾಗಲಿ ಅಂತ. ಕುಂದಗೋಳ ಕ್ಷೇತ್ರಕ್ಕೆ ಒಳ್ಳಯದಾಗೋದಾದ್ರೆ ಬಿಜೆಪಿಯವರು, ಕಾಂಗ್ರೆಸ್ನವರು ನನ್ನ ಬಲಿ ಕೊಡಲಿ ಎಂದು ರೇಣುಕಾಚಾರ್ಯರ 'ಡಿಕೆಶಿ ಮಾರಿ ಹಬ್ಬಕ್ಕೆ ಬಲಿ ಕೊಡೋ ಕೋಣ' ಹೇಳಿಕೆಗೆ ತೀರುಗೇಟು ನೀಡಿದರು.
ನನ್ನನ್ನ ಬಲಿ ಕೊಡುವುದರಿಂದ ಬಿಜೆಪಿಗೆ ಖುಷಿಯಾಗುವುದಾದರೆ ಬಲಿ ಕೊಡಲಿ. ನಗುವುದು ಸಹಜ ಧರ್ಮ, ನಗಿಸುವುದು ಪರಧರ್ಮ ಎಂದು ಡಿವಿಜಿಯ ಮಂಕು ತಿಮ್ಮನ ಕಗ್ಗದ ಸಾಲುಗಳನ್ನು ಹೇಳಿ ವ್ಯಂಗ್ಯವಾಡಿದರು.
ಉತ್ತರ-ಕರ್ನಾಟಕ ಕಾಂಗ್ರೆಸ್ನಲ್ಲಿ ಗಂಡಸಿರಿಲ್ಲ, ಹೀಗಾಗಿ ಡಿಕೆಶಿಯನ್ನು ಕುಂದಗೋಳ ಉಸ್ತವಾರಿ ಮಾಡಿದ್ದಾರೆ ಎಂಬ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆಶಿ, ಪಾಟೀಲ್ಗೆ ನಮ್ಮ ಪಾಟೀಲರೇ ಉತ್ತರ ನೀಡುತ್ತಾರೆ. ಅವರ ಜಿಲ್ಲೆಯ ನಮ್ಮ ಎಂ.ಬಿ.ಪಾಟೀಲರೇ ಉತ್ತರ ನೀಡುತ್ತಾರೆ ಎದರು.