ಹುಬ್ಬಳ್ಳಿ (ಧಾರವಾಡ): ನಗರದ ಲ್ಯಾಮಿಂಗ್ಟನ್ ರಸ್ತೆ ನೆಹರೂ ಮೈದಾನದ ಬಳಿ ಕಳೆದ ಶನಿವಾರ ನಸುಕಿನ ಜಾವ ಚಿಂದಿ ಆಯುವ ಸುಮಾ ಎಂಬಾಕೆಯನ್ನು ಕಲ್ಲಿನಿಂದ ಜಜ್ಜಿ ಭೀಕರವಾಗಿ ಹತ್ಯೆ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಶಹರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಹಣಕ್ಕಾಗಿ ರಸ್ತೆ ಬದಿ ಮಲಗುವವರನ್ನೇ ಟಾರ್ಗೆಟ್ ಮಾಡಿಕೊಂಡು ವ್ಯಕ್ತಿಯೊಬ್ಬ ಕೊಲೆ ಮಾಡಿದ್ದಾನೆ. ಈ ಹಿಂದೆಯೂ ಈತ ಇಂತಹ ಕೊಲೆ ಮಾಡಿದ್ದಾನೆ ಎಂಬುದು ತನಿಖೆಯಿಂದ ತಿಳಿದು ಬಂದಿದೆ. ಶನಿವಾರದಂದು ದಾವಣಗೆರೆ ಮೂಲದ ಚಿಂದಿ ಆಯುವ ಸುಮಾ ಹಾಗೂ ಆಕೆಯ ಗಂಡ ರಸ್ತೆ ಬದಿ ಮಲಗಿದ್ದರು. ಹಣಕ್ಕಾಗಿ ಇವರ ಮೇಲೆ ದಾಳಿ ಮಾಡಿದ ಆರೋಪಿ ಸುಮಾಳನ್ನು ಕೊಲೆ ಮಾಡಿದ್ದ. ಅವರ ಗಂಡ ಸುರೇಶ ಕಂಠಪೂರ್ತಿ ಕುಡಿದಿದ್ದರಿಂದ ಆತನಿಗೂ ಹಲ್ಲೆ ಮಾಡಿ ಆತನಿಂದಲೂ ಹಣ ಕಿತ್ತು ಪರಾರಿಯಾಗಿದ್ದ.