ಕರ್ನಾಟಕ

karnataka

By

Published : Jul 21, 2021, 11:13 AM IST

ETV Bharat / city

Video: ಗೆಳೆಯರ ಜೋಡಿ ಆಟಿಲ್ಲ, ಶಾಲ್ಯಾಗ ಟೀಚರ್ ಪಾಠಿಲ್ಲಾ: ಶಿಕ್ಷಕನ ವಿನೂತನ ಪ್ರಯೋಗಕ್ಕೆ ಸಖತ್ ರೆಸ್ಪಾನ್ಸ್

ಹುಬ್ಬಳ್ಳಿ ತಾಲೂಕಿನ ಕೋಳಿವಾಡ ಗ್ರಾಮದ ಶ್ರೀಮತಿ ರುದ್ರಮ್ಮ ರಾಯಪ್ಪ ಗುಂಜಳ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬಸವರಾಜ ಗುದ್ದಿನ ಅವರು, 'ಶಾಲೆಯ ಮಕ್ಕಳೊಂದಿಗೆ ಗೆಳೆಯರ ಜೋಡಿ ಆಟಿಲ್ಲ, ಶಾಲ್ಯಾಗ ಟೀಚರ್ ಪಾಠಿಲ್ಲಾ' ಎಂಬ ಡಿಜೆ ಸಾಂಗ್ ಸಂಯೋಜನೆ ಮಾಡಿ ಎಲ್ಲರ ಗಮನ ತಮ್ಮ ಶಾಲೆಯತ್ತ ಸೆಳೆಯುವಂತೆ ಮಾಡಿದ್ದಾರೆ.

Hubli
ಶಿಕ್ಷಕನ ವಿನೂತನ ಪ್ರಯೋಗಕ್ಕೆ ಸಖತ್ ರೆಸ್ಪಾನ್ಸ್

ಹುಬ್ಬಳ್ಳಿ:ಕಿಲ್ಲರ್ ಕೊರೊನಾ ವೈರಸ್​ನಿಂದಾಗಿ ಶಾಲೆಗಳು ಬಾಗಿಲು ಹಾಕಿವೆ. ಆದರೆ, ಮಕ್ಕಳು ಶಾಲೆಯಲ್ಲಿ ಕಲಿಯುವ ಆಟ, ಪಾಠಗಳು ಕೊನೆವರೆಗೂ ಇರುವಂತಹದ್ದು. ಶಾಲೆಯ ಮಕ್ಕಳನ್ನು ಬಳಸಿಕೊಂಡು ಬಾಲ್ಯದ ನೆನಪನ್ನು ಮತ್ತೆ ಮರುಕಳಿಸುವಂತೆ ಹಾಡೊಂದನ್ನು ರಚಿಸುವ ಮೂಲಕ ಹುಬ್ಬಳ್ಳಿಯ ಶಿಕ್ಷಕರೊಬ್ಬರು ಗಮನ ಸೆಳೆದಿದ್ದಾರೆ.

ಗೆಳೆಯರ ಜೋಡಿ ಆಟಿಲ್ಲ, ಶಾಲ್ಯಾಗ ಟೀಚರ್ ಪಾಠಿಲ್ಲಾ: ಶಿಕ್ಷಕನ ವಿನೂತನ ಪ್ರಯೋಗಕ್ಕೆ ಸಖತ್ ರೆಸ್ಪಾನ್ಸ್

ಹೌದು.. ಹುಬ್ಬಳ್ಳಿ ತಾಲೂಕಿನ ಕೋಳಿವಾಡ ಗ್ರಾಮದ ಶ್ರೀಮತಿ ರುದ್ರಮ್ಮ ರಾಯಪ್ಪ ಗುಂಜಳ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬಸವರಾಜ ಗುದ್ದಿನ ಅವರು, 'ಶಾಲೆಯ ಮಕ್ಕಳೊಂದಿಗೆ ಗೆಳೆಯರ ಜೋಡಿ ಆಟಿಲ್ಲ, ಶಾಲ್ಯಾಗ ಟೀಚರ್ ಪಾಠಿಲ್ಲಾ' ಎಂಬ ಡಿಜೆ ಸಾಂಗ್ ಸಂಯೋಜನೆ ಮಾಡಿ ಎಲ್ಲರ ಗಮನ ತಮ್ಮ ಶಾಲೆಯತ್ತ ಸೆಳೆಯುವಂತೆ ಮಾಡಿದ್ದಾರೆ.

ಗೆಳೆಯರ ಜೋಡಿ ಆಟಿಲ್ಲ, ಶಾಲ್ಯಾಗ ಟೀಚರ್ ಪಾಠಿಲ್ಲಾ: ಶಿಕ್ಷಕನ ವಿನೂತನ ಪ್ರಯೋಗಕ್ಕೆ ಸಖತ್ ರೆಸ್ಪಾನ್ಸ್

ಬಸವರಾಜ ಪೂಜಾರ್​ ಎಂಬ ವಿದ್ಯಾರ್ಥಿ ಈ ಹಾಡಿಗೆ ಧ್ವನಿ ನೀಡಿದ್ದು, ಮಕ್ಕಳ ಆಟ ಪಾಠದ ಚಿತ್ರೀಕರಣದ ಮೂಲಕ ವಿಡಿಯೋ ಡಿಜೆ ಸಾಂಗ್ ನಿರ್ಮಾಣ ಮಾಡಿದ್ದಾರೆ. ಕೊರೊನಾ ಸೋಂಕು ಮಕ್ಕಳ ಶೈಕ್ಷಣಿಕ ಬದುಕಿನ ಮೇಲೆ ತಂದೊಡ್ಡಿದ ಪರಿಣಾಮಗಳನ್ನು ಸಾಹಿತ್ಯದ ಎಳೆ ಎಳೆಯಾಗಿ ಮೂಲಕ ಬಿಚ್ಚಿಟ್ಟಿದ್ದಾರೆ.

ತಮ್ಮ ಶಾಲೆಯ ವಿದ್ಯಾರ್ಥಿಯಿಂದಲೇ ಈ ಹಾಡು ಹಾಡಿಸಬೇಕೆಂಬ ಉದ್ದೇಶದಿಂದ ಬಸವರಾಜ ಪೂಜಾರ್ ಎಂಬ ಬಾಲಕನಿಗೆ ಸೂಕ್ತ ತರಬೇತಿ ನೀಡಿ, ಹಾಡಿಸಿದ್ದಾರೆ. ಈ ಹಾಡಿಗೆ ಇದಕ್ಕೆ ಅದೇ ಶಾಲೆಯ ಮಕ್ಕಳು ನಟಿಸಿದ್ದಾರೆ.

ಶಿಕ್ಷಕ ಬಸವರಾಜ ಗುದ್ದಿನ ಮಕ್ಕಳೊಂದಿಗೆ ಸೇರಿ ಮಾಡಿರುವ ವಿನೂತನ ಪ್ರಯೋಗಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದ್ದು, ಬಾಲ್ಯದ ನೆನಪುಗಳನ್ನು ಮರುಕಳಿಸುವ ಈ ಹಾಡು ಎಲ್ಲೆಡೆ ಸಖತ್ ವೈರಲ್ ಆಗುತ್ತಿದೆ.

ಇದನ್ನೂ ಓದಿ:ಬಿಗ್​ಬಾಸ್​ -8: ಮೊದಲ ಬಾರಿಗೆ ತಾಳ್ಮೆ ಕಳೆದುಕೊಂಡ ಗುಳಿಕೆನ್ನೆ ಚೆಲುವೆ ವೈಷ್ಣವಿ ಗೌಡ!

ABOUT THE AUTHOR

...view details