ದಾವಣಗೆರೆ: ಕಟರ್ನಿಂದ ಎಟಿಎಂ ಯಂತ್ರ ಕಟ್ ಮಾಡಿ ಖದೀಮರು ಲಕ್ಷಾಂತರ ರೂ. ಹಣ ದೋಚಿರುವ ಘಟನೆ ದಾವಣಗೆರೆ ನಗರದ ಬಿಐಇಟಿ ಕಾಲೇಜ್ ಬಳಿಯ ವಿವೇಕಾನಂದ ಬಡಾವಣೆಯಲ್ಲಿ ನಡೆದಿದೆ.
ದಾವಣೆಗೆರೆ; ಎಟಿಎಂ ಯಂತ್ರ ಕೊರೆದು ಹಣ ದೋಚಿದ ಖದೀಮರು - Thieves who stole money from ATM machine
ತಡರಾತ್ರಿ ಎಕ್ಸಿಸ್ ಬ್ಯಾಂಕ್ಗೆ ಸೇರಿದ ಎಟಿಎಂನಲ್ಲಿ ಲಕ್ಷಾಂತರ ರೂ. ಹಣ ದೋಚಿ ಖದೀಮರು ಪರಾರಿಯಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
![ದಾವಣೆಗೆರೆ; ಎಟಿಎಂ ಯಂತ್ರ ಕೊರೆದು ಹಣ ದೋಚಿದ ಖದೀಮರು ಎಟಿಎಂ](https://etvbharatimages.akamaized.net/etvbharat/prod-images/768-512-11106028-thumbnail-3x2-lek.jpg)
ಎಟಿಎಂ
ತಡರಾತ್ರಿ ಎಕ್ಸಿಸ್ ಬ್ಯಾಂಕ್ಗೆ ಸೇರಿದ ಎಟಿಎಂ ಅನ್ನು ಕಟ್ ಮಾಡಿ ಕಳ್ಳರು ಹಣ ದೋಚಿದ್ದು, ಈ ಕುರಿತು ವಿದ್ಯಾನಗರ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾರೆ.
ಇನ್ನು ಎಟಿಎಂ ನಿಂದ ಎಷ್ಟು ಹಣವನ್ನು ಕಳ್ಳರು ಎಗರಿಸಿದ್ದಾರೆ ಎಂಬ ಕುರಿತು ಮಾಹಿತಿ ಲಭ್ಯವಾಗಿಲ್ಲ. ದಾವಣಗೆರೆ ನಗರದ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ಜರುಗಿದೆ.