ಕರ್ನಾಟಕ

karnataka

ETV Bharat / city

ವಿಜಯೇಂದ್ರ ವಸೂಲಿ ಮಾಡ್ಲಿ, ಎಲ್ಲಾ ಖಾತೆಗಳನ್ನು ಬೊಮ್ಮಾಯಿಗೆ ಕೊಡ್ಲಿ: ಬಿಎಸ್​ವೈ ವಿರುದ್ಧ ಯತ್ನಾಳ್​​ ಮತ್ತೆ ವಾಕ್ಬಾಣ - Basangouda Patil Yatnal statement on basavaraja bommayi

ಮಾಧುಸ್ವಾಮಿ ಕಾನೂನು ಪಂಡಿತರು. ಯಡಿಯೂರಪ್ಪ ಸರ್ಕಾರ ಬರಲು ಸದನದಲ್ಲಿ ಹೋರಾಟ ಮಾಡಿದ್ದಾರೆ. ಅವರನ್ನು ಬಿಟ್ಟು ಬೊಮ್ಮಾಯಿಗೆ ಯಾಕೆ ಕಾನೂನು ಖಾತೆ ಕೊಟ್ಟಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನೆ ಮಾಡಿದರು‌.

give-all-mistrial-post-to-basavaraj-bommayi-basangouda-patil-yatnal-said
ಯತ್ನಾಳ್

By

Published : Jan 28, 2021, 7:32 PM IST

ದಾವಣಗೆರೆ: ವಿಜಯೇಂದ್ರ ವಸೂಲಿ ಮಾಡುತ್ತಾ ಹೋಗಲಿ, ಎಲ್ಲಾ ಖಾತೆಗಳನ್ನು ಬಸವರಾಜ್ ಬೊಮ್ಮಾಯಿಗೆ ಕೊಡಲಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದರು.

ವಿಜಯೇಂದ್ರ ವಸೂಲಿ ಮಾಡ್ಲಿ, ಎಲ್ಲಾ ಖಾತೆಗಳನ್ನ ಬೊಮ್ಮಾಯಿಗೆ ಕೊಡ್ಲಿ: ಯತ್ನಾಳ್​ ಕಿಡಿ

ಹರಿಹರದಲ್ಲಿ ಮಾತನಾಡಿದ ಅವರು, ಬಿಜೆಪಿ ಹೈಕಮಾಂಡ್​ಗೆ ನನ್ನನ್ನ ಕೈ ಬಿಟ್ಟರೆ ವೀರಶೈವ ಲಿಂಗಾಯತರು ದೂರ ಆಗ್ತಾರೆ ಎಂದು ಯಡಿಯೂರಪ್ಪ ಹೆದರಿಸಿದ್ದಾರೆ. ಶಾಸಕರು ಹೋದ್ರೆ ಅನುದಾನ ಇಲ್ಲಾ ಅಂತಾರೆ. ವೀರಶೈವ ಪ್ರಾಧಿಕಾರ ಮಾಡಿ ಹಣ ನೀಡುವುದಾಗಿ ಹೇಳಿದ್ದಾರೆ. ಆದ್ರೆ ಖಜಾನೆಯಲ್ಲಿಯೇ ಹಣವಿಲ್ಲ ಎಂದರು.

ಓದಿ-ನಡುರಸ್ತೆಯಲ್ಲೇ ಯುವತಿಯ ಕೊಂದು ತೋಟದಲ್ಲಿ ನೇಣಿಗೆ ಶರಣಾದ ಯುವಕ

ಸಿಎಂ ಎಲ್ಲರಿಗೂ ಮೋಸ ಮಾಡಿದ್ದಾರೆ

ಯಡಿಯೂರಪ್ಪ ಸಿಎಂ ಆಗಿ ಜಾಸ್ತಿ ದಿನ ಮುಂದುವರೆಯಲ್ಲ. ಸಿಎಂ ಎಲ್ಲರಿಗೂ ಮೋಸ ಮಾಡಿದ್ದಾರೆ. ಅವರು ಸಿಎಂ ಆಗಿ ಮುಂದುವರೆಯಲು ಸಾದ್ಯವಿಲ್ಲ ಎಂದು ಬಿಎಸ್​ವೈ ವಿರುದ್ಧ ಮತ್ತೆ ಹರಿಹಾಯ್ದರು.

ಬೊಮ್ಮಾಯಿಗೆ ಯಾಕೆ ಕಾನೂನು ಖಾತೆ

ಅಲ್ಲದೆ, ಬೊಮ್ಮಾಯಿಗೆ ಕಾನೂನು ಖಾತೆ ಕೊಟ್ಟಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಯತ್ನಾಳ್​​, ಮಾಧುಸ್ವಾಮಿ ಕಾನೂನು ಪಂಡಿತರು. ಯಡಿಯೂರಪ್ಪ ಸರ್ಕಾರ ಬರಲು ಸದನದಲ್ಲಿ ಹೋರಾಟ ಮಾಡಿದ್ದಾರೆ. ಅವರನ್ನು ಬಿಟ್ಟು ಬೊಮ್ಮಾಯಿಗೆ ಯಾಕೆ ಕಾನೂನು ಖಾತೆ ಕೊಟ್ಟಿದ್ದಾರೆ ಎಂದು ಪ್ರಶ್ನೆ ಮಾಡಿದರು‌.

ABOUT THE AUTHOR

...view details