ಕರ್ನಾಟಕ

karnataka

ETV Bharat / city

ಇವರ ಮನೆಯೇ ಹಸಿರು ತುಂಬಿದ ಕೈತೋಟ.. ವೈದ್ಯೆಯ ನಿವಾಸದ ತುಂಬ ಹೂ, ತರಕಾರಿ, ಜೇನು

ವೃತ್ತಿಯಲ್ಲಿ ವೈದ್ಯೆಯಾಗಿರುವ ಶಾಂತರವರು ರೋಗಿಗಳನ್ನು ನೋಡ್ತಾ, ಇತ್ತ ಮನೆ ಬಳಿ ಆಕ್ಸಿಜನ್ ಪ್ಲಾಂಟ್​ಗಳು ಸೇರಿದ್ದಂತೆ ತರಹೇವಾರಿ ಗಿಡ ಮರಗಳನ್ನು ನೆಡುವ ಮೂಲಕ ಅವುಗಳನ್ನು ಪೋಷಣೆ ಮಾಡುತ್ತಾ ಎರಡರಲ್ಲೂ ಸೈ ಎನಿಸಿಕೊಂಡಿದ್ದಾರೆ.

By

Published : Aug 20, 2022, 6:40 PM IST

Updated : Aug 20, 2022, 7:21 PM IST

Doctor made garden in Terrace
ಶಾಂತಾರವರ ಕೈತೋಟ

ದಾವಣಗೆರೆ:ಅವರು ವೃತ್ತಿಯಲ್ಲಿ ವೈದ್ಯೆ, ರೋಗಿಗಳನ್ನು ಆರೈಕೆ ಮಾಡುವುದರೊಂದಿಗೆ ಮನೆಯಲ್ಲೇ ಸುಂದರ ಕೈ ತೋಟವನ್ನು ಮಾಡಿಕೊಂಡು ಇಡೀ ಮನೆಯನ್ನು ಹಚ್ಚ ಹಸಿರಾಗಿ ಮಾಡಿದ್ದಾರೆ. ಮನೆ ಸುತ್ತ ಎಲ್ಲಿ ನೋಡಿದರಲ್ಲಿ ಆಕ್ಸಿಜನ್ ನೀಡುವ ಪ್ಲಾಂಟ್​ಗಳನ್ನು ನೆಟ್ಟಿರುವ ಇವರು ತರಕಾರಿ ಬೆಳೆದು ಅದನ್ನು ಮನೆಗೆ ಬಳಕೆ ಮಾಡುತ್ತಿದ್ದಾರೆ. ಇದಲ್ಲದೆ ತಾರಸಿಯಲ್ಲೂ ತರಕಾರಿ ಬೆಳೆದಿರುವ ಇವರು ಐದು ವರ್ಷಗಳಿಂದ ಇಡೀ ದಾವಣಗೆರೆಯಲ್ಲಿ ಮನೆ ಮಾತಾಗಿದ್ದಾರೆ.

ನಗರದ ಎಸ್​ ಎಸ್ ಬಡಾವಣೆಯ ನಿವಾಸಿಯಾದ ವೈದ್ಯೆ ಶಾಂತ ಭಟ್ ಅವರು ಐದು ವರ್ಷಗಳಿಂದ ವೈದ್ಯೆ ವೃತ್ತಿ ಮಾಡುತ್ತಲೇ ತಮ್ಮ ಮನೆಯ ಪಕ್ಕ ಹಾಗು ತಾರಸಿಯಲ್ಲಿ ಪುಟ್ಟ ಕೈ ತೋಟ ಮಾಡಿಕೊಮಡು ಹಸಿರು ವಾತಾವರಣ ನಿರ್ಮಿಸಿಕೊಂಡಿದ್ದಾರೆ. ನಗರದಲ್ಲಿ ಕೈ ತೋಟ ಮಾಡುವುದು ಅಷ್ಟು ಸುಲಭವಲ್ಲ, ಆದರೆ ಶಾಂತ ಭಟ್ ಅವರು ಇದನ್ನು ಮಾಡಿತೋರಿಸಿದ್ದಾರೆ.

ಮನೆಯಲ್ಲೇ ಕೈತೋಟ ನಿರ್ಮಿಸಿರುವ ವೈದ್ಯೆ ಶಾಂತ

ತಾರಸಿ ಮೇಲೆ ಕೈತೋಟ: ಮೊಟ್ಟ ಮೊದಲು ತಮ್ಮ ಮನೆಯ ತಾರಾಸಿಯಲ್ಲಿ ಪುಟ್ಟ ಕೈತೋಟ ಮಾಡಿಕೊಂಡು ಎಲ್ಲಾ ತರಹದ ಸೊಪ್ಪು, ಹೀರೆಕಾಯಿ, ಟೊಮೆಟೊ, ಜವಳಿಕಾಯಿ, ಬದನೆಕಾಯಿ, ಚಪ್ಪರದ ಅವರೆ ಕಾಯಿ, ನುಗ್ಗೆ, ಕರಿಬೇವು, ಬಸಳೆ ಸೊಪ್ಪು, ಚಕ್ರಮನಿ ಸೊಪ್ಪು ಹಾಗು ಡ್ರ್ಯಾಗನ್ ಫ್ರುಟ್ ಗಿಡವನ್ನು ಕೂಡ ಹಾಕಿ ಅದರಿಂದ ಬರುವ ತರಕಾರಿಯನ್ನು ಮನೆಗೆ ಬಳಸುತ್ತಿದ್ದಾರೆ.

ಹಸಿ ಕಸವೇ ಇಲ್ಲಿ ಗೊಬ್ಬರ: ಮನೆಯ ಪಕ್ಕದಲ್ಲೇ ಇವರು ಮತ್ತೊಂದು ಕೈ ತೋಟ ಮಾಡಿಕೊಂಡು ಅಲ್ಲು ಕೂಡ ಸೀಮೆ ಬದನೆಕಾಯಿ, ಕುಂಬಳಕಾಯಿ, ಪಪ್ಪಾಯಿ, ಸೀಬೆ, ಮೂಲಂಗಿ, ಕ್ಯಾರೆಟ್, ಈರುಳ್ಳಿ ಕೂಡ ಹಾಕಿದ್ದಾರೆ. ದಡ್ಡಿ ಸೊಪ್ಪು, ಚೈನಾ ಗ್ರಾಸ್, ಬೋಗನ್ ವಿಲ್ಲಾ, ಸೀತಾಫಲ, ಕಿರುನೆಲ್ಲಿಕಾಯಿ ಹೀಗೆ ತರಹೇವಾರಿ ತರಕಾರಿ ಹಾಗು ಸೊಪ್ಪು ಬೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕೈ ತೋಟಕ್ಕೆ ಮನೆಯಲ್ಲಿರುವ ಹಸಿ ಕಸವನ್ನು ಬಳಕೆ ಮಾಡಿ ಸಾವಯವ ಗೊಬ್ಬರ ಉತ್ಪಾದಿಸುವ ಮಾಡಿಕೊಳ್ಳುವ ಮೂಲಕ ಕೈ ತೋಟಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದೇವೆ ಎನ್ನುತ್ತಾರೆ ವೈದ್ಯೆ ಶಾಂತ ಭಟ್.

ಮನೆಯಲ್ಲೇ ಕೈತೋಟ ನಿರ್ಮಿಸಿರುವ ವೈದ್ಯೆ ಶಾಂತ

ಮನೆಯ ಪೂಜೆಗೆ ತೋಟದ ಹೂ: ಇದಲ್ಲದೆ ಮನೆಯ ಕೆಳ ಭಾಗದಲ್ಲಿ ವಿವಿಧ ಹೂವುಗಳ ಗಿಡಗಳನ್ನು ಹಾಕಿರುವ ಶಾಂತ ಭಟ್ ಅವರು ಲಿಲ್ಲಿ ಹೂವು, ಗುಲಾಬಿ, ತುಳಸಿ, ಹಳದಿ ಜಾಜಿ, ಶ್ರೀಲಂಕಾ ಜಾಸ್ಮೀನ್, ದಾಸವಾಳ, ಭೋಗನ್ ವಿಲ್ಲಾ, ನಂದಿ ಬಟ್ಟಲು, ಮರುಗ, ಸೇವಂತಿಗೆ ಹೂವು ಹೀಗೆ ವಿವಿಧ ತಳಿಯ ಹೂವುಗಳನ್ನು ಕೂಡ ಬೆಳೆಯುತ್ತಿದ್ದಾರೆ. ಅವುಗಳನ್ನು ಮನೆಯಲ್ಲಿ ಪೂಜೆಗೆ ಬಳಸುತ್ತಿದ್ದಾರೆ.

ಜೇನು ಸಾಕಾಣೆಯಲ್ಲೂ ಸೈ: ಮನೆಯ ತುಂಬ ಆಕ್ಸಿಜನ್ ನೀಡುವ ಮನಿ ಪ್ಲಾಂಟ್, ಸ್ನೇಕ್ ಪ್ಲಾಂಟ್, ಜಪಾನಿಸ್ ಫರ್ಮ್, ಇಂಡೋರ್ ಪ್ಲಾಂಟ್​ಗಳನ್ನು ಹಾಕಿದ್ದರಿಂದ ಈ ಗಿಡಗಳು ಉತ್ತಮವಾದ ಆಕ್ಸಿಜನ್ ನೀಡುವ ಕೆಲಸ ಮಾಡುತ್ತಿವೆ. ನಗರ ಪ್ರದೇಶದಲ್ಲಿ ವೈದ್ಯೆ ಶಾಂತ ಭಟ್ ಅವರು ಜೇನು ಸಾಕಾಣಿಕೆ ಮಾಡುತ್ತಿದ್ದು, ಅದರಿಂದ ಬರುವ ಜೇನು ಮನೆಗೆ ಉಪಯೋಗ ಮಾಡುತ್ತಿರುವುದು ವಿಶೇಷವಾಗಿದೆ. ಈ ಎಲ್ಲಾ ಗಿಡಗಳನ್ನು ಹಾಗು ಕೈ ತೋಟಗಳನ್ನು ನೋಡಿಕೊಳ್ಳಲು ಒಬ್ಬರನ್ನು ನೇಮಿಸಿದ್ದಾರೆ. ಕಳೆದ 15 ವರ್ಷದಿಂದ ತೋಟ ನೋಡಿಕೊಳ್ಳುತ್ತಿರುವ ಶಂಕ್ರಮ್ಮ ಅವರು ಈ ತೋಟದಿಂದ ಬರುವ ಫಸಲು ಮನೆಗೆ ಬಳಕೆ ಮಾಡುತ್ತೇವೆ ಎಂದು ತಿಳಿಸಿದರು.

ಮನೆಯಲ್ಲೇ ಕೈತೋಟ ನಿರ್ಮಿಸಿರುವ ವೈದ್ಯೆ ಶಾಂತ

ಒಟ್ಟಾರೆ ವೈದ್ಯೆ ಶಾಂತ ಭಟ್ ಅವರು ಮನುಷ್ಯನಿಗೆ ಅತ್ಯವಶ್ಯಕವಾಗಿರುವ ಆಕ್ಸಿಜನ್ ಪ್ಲಾಂಟ್​ಗಳು ಸೇರಿದಂತೆ ತರಹೇವಾರಿ ಗಿಡ ಮರಗಳನ್ನು ನೆಡುವ ಮೂಲಕ ಅವುಗಳನ್ನು ಪೋಷಣೆ ಮಾಡುತ್ತಿದ್ದಾರೆ. ವೃತ್ತಿಯಲ್ಲಿ ವೈದ್ಯೆಯಾಗಿರುವ ಶಾಂತ ಅವರು ರೋಗಿಗಳಿಗೆ ಚಿಕಿತ್ಸೆ ನೀಡುತ್ತ, ಇತ್ತ ಮನೆ ಬಳಿ ಕೈ ತೋಟ ಮಾಡಿ ಸೈ ಎನಿಸಿಕೊಂಡಿದ್ದಾರೆ. ಅವರ ಈ ವಿಶಿಷ್ಟ ಹವ್ಯಾಸಕ್ಕೆ ಸಾರ್ವಜನಿಕರ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗ್ತಿದೆ.

ಇದನ್ನೂ ಓದಿ :ಮಂಗಳೂರಿನಲ್ಲೊಂದು ಅಪರೂಪದ ತಾರಸಿ ತೋಟ: ಕಡಲನಗರಿಯಲ್ಲಿ ಕಾಬೂಲ್ ದ್ರಾಕ್ಷಿ ಬೆಳೆ

Last Updated : Aug 20, 2022, 7:21 PM IST

ABOUT THE AUTHOR

...view details