ದಾವಣಗೆರೆ:ನಟ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಸಿನೆಮಾ ಇಂದು ದೇಶ, ವಿದೇಶಗಳಲ್ಲಿ ಬಿಡುಗಡೆಯಾಗಿದೆ. ದಾವಣಗೆರೆಯ ತ್ರಿನೇತ್ರ ಚಿತ್ರಮಂದಿರದ ಬಳಿ ಜಮಾಯಿಸಿದ ಅಭಿಮಾನಿಗಳು ರಾತ್ರಿಯಿಡೀ ಸುರಿದ ತುಂತುರು ಮಳೆಯಲ್ಲೇ ನಿಂತು ಟಿಕೆಟ್ ಪಡೆದು ಸಿನಿಮಾ ನೋಡಿದರು.
ದಾವಣಗೆರೆ: ಮಳೆ ಲೆಕ್ಕಿಸದೆ 'ವಿಕ್ರಾಂತ್ ರೋಣ' ವೀಕ್ಷಿಸಿದ ಅಭಿಮಾನಿಗಳು - Kiccha Sudeep Films
ನಿರಂತರವಾಗಿ ಸುರಿಯುತ್ತಿದ್ದ ಮಳೆಯಲ್ಲೇ ಚಿತ್ರಮಂದಿರದ ಹೊರಗೆ ನಿಂತು ಟಿಕೆಟ್ ಪಡೆದು ವಿಕ್ರಾಂತ್ ರೋಣ ಸಿನಿಮಾವನ್ನು ದಾವಣಗೆರೆಯ ಅಭಿಮಾನಿಗಳು ವೀಕ್ಷಿಸಿದರು.
ಮಳೆಯನ್ನೂ ಲೆಕ್ಕಿಸದೆ ವಿಕ್ರಾಂತ್ ರೋಣನನ್ನು ಕಣ್ತುಂಬಿಕೊಳ್ಳಲು ಆಗಮಿಸಿದ ಅಭಿಮಾನಿಗಳು
ಚಿತ್ರಮಂದಿರದಲ್ಲಿ ನೂಕುನುಗ್ಗಲು, ಗಾಜು ಪುಡಿ: ಅಭಿಮಾನಿಗಳು ಚಿತ್ರಮಂದಿರದೊಳಗೆ ಹೋಗುವಾಗ ನೂಕುನುಗ್ಗಲು ಉಂಟಾಗಿದ್ದು, ಚಿತ್ರಮಂದಿರದ ಗಾಜು ಪುಡಿಯಾಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಇದನ್ನೂ ಓದಿ :ಮಧ್ಯರಾತ್ರಿಯಿಂದಲೇ 'ವಿಕ್ರಾಂತ್ ರೋಣ' ಅಬ್ಬರ, ಅಭಿಮಾನಿಗಳ ಹರ್ಷೋದ್ಘಾರ
Last Updated : Jul 28, 2022, 1:21 PM IST