ದಾವಣಗೆರೆ: ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಿದರಿಕೆರೆ ಗ್ರಾಮದ ಹೊರ ವಲಯದಲ್ಲಿ ರಿನ್ಯೂವ್ ಪವರ್ ಪ್ಲಾಂಟ್ ಎಂಬ ಖಾಸಗಿ ಕಂಪನಿ ಪವರ್ ಪ್ಲಾಂಟ್ ಹಾಕಲು ಎಳೆಯಲು ಸಿದ್ಧತೆ ನಡೆಸಿದೆ. ಚಿತ್ರದುರ್ಗ-ಜಗಳೂರು ಪವರ್ ಪ್ಲಾಂಟ್ ಯೋಜನೆ ಇದಾಗಿದೆ.
ಈಗಾಗಲೇ ತಕ್ಕ ಮಟ್ಟಿಗೆ ಪರಿಹಾರ ನೀಡಿ ಜಗಳೂರು ಹಾಗು ಚಿತ್ರದುರ್ಗ ಭಾಗದಲ್ಲಿ ಕಂಬಗಳನ್ನು ಜಮೀನಿನಲ್ಲಿ ಹೂಳುವ ಮೂಲಕ ಪವರ್ ಲೈನ್ ಎಳೆದಿದ್ದು, ಅ ಕಾಮಗಾರಿ ಜಗಳೂರು ತಾಲೂಕಿನ ಬಿದರಿಕೆರೆಗೆ ಬಂದು ನಿಂತಿದೆ. ಆದ್ರೆ, ಈ ಭಾಗದ ರೈತರು ಜಮೀನು ಬಿಟ್ಟು ಕೊಡುವುದಿಲ್ಲ ಎಂದು ಪಟ್ಟು ಹಿಡಿದಿರುವುದು ಕಂಪನಿಯವರಿಗೆ ತಲೆಬಿಸಿಯಾಗಿ ಪರಿಣಮಿಸಿದೆ.
ಬಿದರಿಕೆರೆ ಗ್ರಾಮದ ಕೂಗಳತೆಯಲ್ಲಿ ಈಗಾಗಲೇ ಪವರ್ ಪ್ಲಾಂಟ್ ನಿರ್ಮಾಣ ಮಾಡಲು ರಿನ್ಯೂವ್ ಪವರ್ ಕಂಪನಿ ಜಮೀನು ಖರೀದಿ ಮಾಡಿ ಸಿದ್ಧತೆ ನಡೆಸಿದ್ದಾರೆ. ಈ ಪವರ್ ಪ್ಲಾಂಟ್ಗೆ ಲೈನ್ ಎಳೆಯಲು ರೈತರ ಜಮೀನಿನಲ್ಲಿ ಕಂಬಗಳನ್ನು ಅಳವಡಿಸಬೇಕಾಗಿದೆ. ಅದ್ರೆ ಸಾಕಷ್ಟು ರೈತರು ಈ ಪವರ್ ಲೈನ್ ಜಮೀನಿನ ಮೇಲೆ ಹೋದ್ರೆ ತಮ್ಮ ಜಮೀನು ಯಾವುದಕ್ಕೂ ಪ್ರಯೋಜನಕ್ಕೆ ಬರುವುದಿಲ್ಲ. ಬೆಳೆ ಬೆಳೆಯಲು ಆಗುವುದಿಲ್ಲ ಎಂದು ಜಮೀನು ನೀಡಲು ಹಿಂದೇಟು ಹಾಕುತ್ತಿದ್ದಾರೆ.