ಬೆಂಗಳೂರು :ಇಂದು ವಿಧಾನ ಪರಿಷತ್ ಸಭಾಪತಿ ಚುನಾವಣೆ ಹಿನ್ನೆಲೆ ಪಕ್ಷದ ವಿಧಾನ ಪರಿಷತ್ ಸದಸ್ಯರ ಜೊತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಭೆ ನಡೆಸಿದರು.
ನಿನ್ನೆ ಅಧಿಕೃತ ನಿವಾಸ ಕಾವೇರಿಯಲ್ಲಿ ಎಂಎಲ್ಸಿಗಳ ಸಭೆ ನಡೆಸಿದ ಸಿಎಂ, ಜೆಡಿಎಸ್ಗೆ ಈಗಾಗಲೇ ಬೆಂಬಲ ಘೋಷಣೆ ಮಾಡಿರುವಂತೆ ಮಂಗಳವಾರ ಜೆಡಿಎಸ್ ಪರ ಮತ ಚಲಾಯಿಸುವಂತೆ ಪರಿಷತ್ ಸದಸ್ಯರಿಗೆ ಸೂಚನೆ ನೀಡಿದರು.