ಕರ್ನಾಟಕ

karnataka

By

Published : Feb 8, 2021, 10:27 PM IST

Updated : Feb 9, 2021, 2:33 AM IST

ETV Bharat / city

ಇಂದು ಸಭಾಪತಿ ಸ್ಥಾನಕ್ಕೆ ಚುನಾವಣೆ... ಹೊರಟ್ಟಿ ಬೆಂಬಲಿಸಲು ಬಿಜೆಪಿ ಸದಸ್ಯರಿಗೆ ಸಿಎಂ ಸೂಚನೆ

ಈಗಾಗಲೇ ಪರಿಷತ್​ನಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆ ಇಂದು ನಡೆಯಲಿರುವ ಸಭಾಪತಿ ಸ್ಥಾನದ ಚುನಾವಣೆಯಲ್ಲಿ ಬಿಜೆಪಿ ಬೆಂಬಲದಿಂದ ಜೆಡಿಎಸ್ ಅಭ್ಯರ್ಥಿ ಗೆಲುವು ಬಹುತೇಕ ಖಚಿತವಾಗಿದೆ.

vidhan parishad speaker election
ವಿಧಾನ ಪರಿಷತ್​ ಸಭಾಪತಿ ಚುನಾವಣೆ

ಬೆಂಗಳೂರು :ಇಂದು ವಿಧಾನ ಪರಿಷತ್ ಸಭಾಪತಿ ಚುನಾವಣೆ ಹಿನ್ನೆಲೆ ಪಕ್ಷದ ವಿಧಾನ ಪರಿಷತ್ ಸದಸ್ಯರ ಜೊತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಭೆ ನಡೆಸಿದರು.

ನಿನ್ನೆ ಅಧಿಕೃತ ನಿವಾಸ ಕಾವೇರಿಯಲ್ಲಿ ಎಂಎಲ್​ಸಿಗಳ ಸಭೆ ನಡೆಸಿದ ಸಿಎಂ, ಜೆಡಿಎಸ್​ಗೆ ಈಗಾಗಲೇ ಬೆಂಬಲ ಘೋಷಣೆ ಮಾಡಿರುವಂತೆ ಮಂಗಳವಾರ ಜೆಡಿಎಸ್ ಪರ ಮತ ಚಲಾಯಿಸುವಂತೆ ಪರಿಷತ್ ಸದಸ್ಯರಿಗೆ ಸೂಚನೆ ನೀಡಿದರು.

ಉಪ ಸಭಾಪತಿ ಸ್ಥಾನ ಬಿಜೆಪಿಗೆ ಹಾಗೂ ಸಭಾಪತಿ ಸ್ಥಾನ ಜೆಡಿಎಸ್​ಗೆ ಎನ್ನುವ ಮಾತುಕತೆಯಂತೆ ಬಸವರಾಜ ಹೊರಟ್ಟಿ ಅವರನ್ನು ಬೆಂಬಲಿಸುವಂತೆ ಸಿಎಂ ತಿಳಿಸಿದರು.

ಈಗಾಗಲೇ ಪರಿಷತ್​ನಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆ ಇಂದು ನಡೆಯಲಿರುವ ಸಭಾಪತಿ ಸ್ಥಾನದ ಚುನಾವಣೆಯಲ್ಲಿ ಬಿಜೆಪಿ ಬೆಂಬಲದಿಂದ ಜೆಡಿಎಸ್ ಅಭ್ಯರ್ಥಿ ಗೆಲುವು ಬಹುತೇಕ ಖಚಿತವಾಗಿದೆ.

Last Updated : Feb 9, 2021, 2:33 AM IST

ABOUT THE AUTHOR

...view details