ಬೆಂಗಳೂರು: ಕುಡಿದ ಅಮಲಿನಲ್ಲಿ ಸಿಕ್ಕಸಿಕ್ಕ ವಾಹನಗಳನ್ನು ಕದ್ದು ನಂಬರ್ಪ್ಲೇಟ್ ಬದಲಿಸಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ. ನದೀಂ ಅಹಮದ್, ಗುಲಾಂ ಹುಸೇನ್ ಬಂಧಿತರು. ಮತ್ತೊಬ್ಬ ಆರೋಪಿ ಎಸ್ಕೇಪ್ ಆಗಿದ್ದಾನೆ. ಆತನಿಗಾಗಿ ಪೊಲೀಸರು ಹುಡುಕಾಟ ಪ್ರಾರಂಭಿಸಿದ್ದಾರೆ.
ಎಣ್ಣೆ ಏಟಲ್ಲಿ ನಂಬರ್ಪ್ಲೇಟ್ ಬದಲಿಸಿ ವಾಹನ ಕದ್ದು ಮಾರುತ್ತಿದ್ದ ಇಬ್ಬರ ಬಂಧನ
ಬನ್ನೇರುಘಟ್ಟ, ಹುಳಿಮಾವು, ಚಂದ್ರಾ ಲೇಔಟ್ ಸೇರಿದಂತೆ ಬೆಂಗಳೂರಿನ ವಿವಿಧೆಡೆ ವಿಲಾಸಿ ಜೀವನ ನಡೆಸಬೇಕೆಂದು ಕುಡಿದ ನಶೆಯಲ್ಲಿ ವಾಹನ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
![ಎಣ್ಣೆ ಏಟಲ್ಲಿ ನಂಬರ್ಪ್ಲೇಟ್ ಬದಲಿಸಿ ವಾಹನ ಕದ್ದು ಮಾರುತ್ತಿದ್ದ ಇಬ್ಬರ ಬಂಧನ Two thief arrested in Bangalore](https://etvbharatimages.akamaized.net/etvbharat/prod-images/768-512-16098658-thumbnail-3x2-lek.jpg)
ಕುಡಿದ ನಶೆಯಲ್ಲಿ ವಾಹನ ಕಳ್ಳತನ ಮಾಡುತ್ತಿರುವ ಖದೀಮರು
ಕುಡಿದ ನಶೆಯಲ್ಲಿ ವಾಹನ ಕಳ್ಳತನ ಮಾಡುತ್ತಿರುವ ಖದೀಮರು
ಬಂಧಿತರು ಕುಡಿತದ ಚಟಕ್ಕೆ ದಾಸರಾಗಿ ವಿಲಾಸಿ ಜೀವನ ನಡೆಸಲು ಕಳ್ಳತನಕ್ಕೆ ಇಳಿದಿದ್ದರು. ಎಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ, ಹುಳಿಮಾವು, ಚಂದ್ರಾಲೇಔಟ್ ವ್ಯಾಪ್ತಿಯಲ್ಲಿ ತಮ್ಮ ಕೈಚಳಕ ತೋರಿಸಿದ್ದರು. ಈ ಹಿಂದೆ ಜೈಲಿಗೆ ಹೋಗಿ ಬಂದಿದ್ದರೂ ಸಹ ಬುದ್ಧಿ ಕಲಿಯದೇ ಹಳೇ ಚಾಳಿಯನ್ನೇ ಮುಂದುವರೆಸಿದ್ದರು. ಬಂಧಿತರಿಂದ 2 ಆಟೋ, 1 ಕಾರು, 6 ಬೈಕ್ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಇದನ್ನೂ ಓದಿ:ಬಟ್ಟೆ ಒಣಹಾಕಿದ್ದ ವೈರ್ಗೆ ವಿದ್ಯುತ್ ತಂತಿ ಸ್ಪರ್ಶಿಸಿ ದಾವಣಗೆರೆಯಲ್ಲಿ ದಂಪತಿ ಸಾವು