ಆನೇಕಲ್: ಈಜಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲಾದ ಘಟನೆ ಆನೇಕಲ್ ತಾಲೂಕಿನ ಮುಗಳೂರು ಕೆರೆಯಲ್ಲಿ ನಡೆದಿದೆ.
ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು - Two students who went swimming were waterproof
ಬಿಸಿಲಿನ ಝಳ ಹೆಚ್ಚಾದ ಹಿನ್ನೆಲೆ ಈಜಲೆಂದು ಕೆರೆಗೆ ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲಾದ ಘಟನೆ ಆನೇಕಲ್ ತಾಲೂಕಿನ ಮುಗಳೂರಿನಲ್ಲಿ ಕಂಡು ಬಂದಿದೆ.
![ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು Two student](https://etvbharatimages.akamaized.net/etvbharat/prod-images/768-512-11234867-thumbnail-3x2-lek.jpg)
Two student
ಬಳ್ಳಾರಿ ಮೂಲದ ಶಿವು (12), ಮಾದನಾಯಕನಹಳ್ಳಿ ಗ್ರಾಮದ ಕಾರ್ತಿಕ್(12) ಸಾವನ್ನಪ್ಪಿದ ವಿದ್ಯಾರ್ಥಿಗಳು. ಇವರು ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು.
ಬಿಸಿಲಿನ ಝಳಕ್ಕೆ ನಿನ್ನೆ ಇಬ್ಬರು ವಿದ್ಯಾರ್ಥಿಗಳು ಯಾರಿಗೂ ತಿಳಿಸದೇ ಈಜಲೆಂದು ಕೆರೆಗೆ ಹೋಗಿದ್ದರು. ಕತ್ತಲಾದರೂ ಮಕ್ಕಳು ಮನೆಗೆ ಬಾರದ ಹಿನ್ನೆಲೆ ಪೋಷಕರು ಹುಡುಕಾಟ ನಡೆಸಿದಾಗ ಈಜಲು ಹೋಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ನಂತರ ಕೆರೆಯ ಸುತ್ತ ಪರಿಶೀಲಿಸಿದಾಗ ಮಕ್ಕಳ ಬಟ್ಟೆಗಳು ಕಂಡು ಬಂದಿದ್ದು, ಅಗ್ನಿಶಾಮಕ ದಳ ಮತ್ತು ಸರ್ಜಾಪುರ ಪೊಲೀಸರು ಶವಗಳನ್ನು ಹೊರತೆಗೆದಿದ್ದಾರೆ.