ಕರ್ನಾಟಕ

karnataka

By

Published : Aug 17, 2021, 7:33 PM IST

ETV Bharat / city

ಕೋವಿಡ್ ನ್ಯೂನ್ಯತೆ ಬಗ್ಗೆ ಅಸಮರ್ಪಕ ಅಂಕಿ-ಅಂಶ: ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಪಿಎಸಿ ತರಾಟೆ

ವಿಧಾನಸೌಧದಲ್ಲಿ ಇಂದು ನಡೆದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆಯಲ್ಲಿ ಅಸಮರ್ಪಕ ಅಂಕಿ-ಅಂಶ ನೀಡಿದ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಸಮಿತಿಯ ಸದಸ್ಯರು ತರಾಟೆಗೆ ತೆಗೆದುಕೊಂಡರು. ಪಿಎಸಿ ಸಮಿತಿ ಸದಸ್ಯರಾದ ರಮೇಶ್ ಕುಮಾರ, ಎ.ಟಿ. ರಾಮಸ್ವಾಮಿ ಸೇರಿದಂತೆ ಹಲವು ಸದಸ್ಯರು ಆರೋಗ್ಯ ಅಧಿಕಾರಿಗಳು ಕೋವಿಡ್ ಸಂಬಂಧಿಸಿ ತಪ್ಪು ಅಂಕಿಅಂಶ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

today-public-accounting-committee-meeting-news
ಸಾರ್ವಜನಿಕ ಲೆಕ್ಕಪತ್ರ ಸಮಿತಿ

ಬೆಂಗಳೂರು: ಆಕ್ಸಿಜನ್, ವೆಂಟಿಲೇಟರ್, ಲಸಿಕೆ, ಕೋವಿಡ್ ಸಾವಿನ ಬಗ್ಗೆ ಅಸಮರ್ಪಕ ಅಂಕಿ-ಅಂಶ ನೀಡಿದ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸದಸ್ಯರು ತರಾಟೆಗೆ ತೆಗೆದುಕೊಂಡಿದ್ದಾರೆ.

ವಿಧಾನಸೌಧದಲ್ಲಿ‌ ಇಂದು ನಡೆದ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಸಭೆಯಲ್ಲಿ ಸಮಿತಿ ಸದಸ್ಯರಾದ ರಮೇಶ್ ಕುಮಾರ, ಎ.ಟಿ. ರಾಮಸ್ವಾಮಿ ಸೇರಿದಂತೆ ಹಲವು ಸದಸ್ಯರು ಆರೋಗ್ಯಾಧಿಕಾರಿಗಳು ಕೋವಿಡ್​ಗೆ ಸಂಬಂಧಿಸಿದಂತೆ ತಪ್ಪು ಅಂಕಿ-ಅಂಶ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಲೆಕ್ಕ ಪತ್ರ ಸಮಿತಿ ಉತ್ತರ ಕೋರಿ 21 ಪ್ರಶ್ನಾವಳಿಯನ್ನು ಆರೋಗ್ಯ ಇಲಾಖೆಗೆ ನೀಡಿತ್ತು. ಆದರೆ, ಅಧಿಕಾರಿಗಳು ತಪ್ಪು ಅಂಕಿ-ಅಂಶವನ್ನು ನೀಡಿರುವುದಾಗಿ ಆರೋಪಿಸಿ ಸಮಿತಿ ಸದಸ್ಯರು ಅಸಮಾಧಾ‌ಗೊಂಡರು.

ಆರೋಗ್ಯ ಅಧಿಕಾರಿಗಳಿಗೆ ಪಿಎಸಿ ತರಾಟೆ

ಬಳಿಕ ಮಾತನಾಡಿದ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಅಧ್ಯಕ್ಷ ರಾಮಲಿಂಗರೆಡ್ಡಿ, ಆರೋಗ್ಯ ಇಲಾಖೆಗೆ ಕೋವಿಡ್ ನ್ಯೂನ್ಯತೆಗಳ ಬಗ್ಗೆ ಮಾಹಿತಿ ಕೇಳಿದ್ದೆವು. ಒಟ್ಟು 21 ಪ್ರಶ್ನೆಗಳನ್ನು ಪ್ರಶ್ನಾವಳಿ ಕೊಟ್ಟಿದ್ದೆವು. ಆದರೆ ಇಲಾಖೆ ಸದಸ್ಯರಿಗೆ ಕೊಟ್ಟ ಉತ್ತರ ಸಮಾಧಾನ ತಂದಿಲ್ಲ. ಅಂಕಿ-ಅಂಶಗಳನ್ನು ಕೂಡಾ ಸರಿಯಾಗಿ ನೀಡಿಲ್ಲ. ಯಾವುದಕ್ಕೆ ಎಷ್ಟು ಖರ್ಚು ಆಗಿದೆ ಎಂಬ ಮಾಹಿತಿ ಸಮರ್ಪಕವಾಗಿಲ್ಲ. ಕೊಟ್ಟ ಉತ್ತರವನ್ನು ಮರುಪರಿಶೀಲನೆ ಮಾಡುವಂತೆ ತಿಳಿಸಲಾಗಿದೆ ಎಂದರು.

ಈ ನಿಟ್ಟಿನಲ್ಲಿ ಮುಂದಿನ ವಾರ ಸಭೆ ನಡೆಯಲಿದೆ. ಕೋವಿಡ್ ಟೆಸ್ಟ್ ಕಿಟ್ ಖರೀದಿ, ವೆಂಟಿಲೇಟರ್ ಖರೀದಿ, ಕಪ್ಪು ಶಿಲೀಂಧ್ರ, ಕೋವಿಡ್ ನಿರ್ವಹಣೆ, ಲಸಿಕೆ ಖರೀದಿ, ಮರಣ ಪ್ರಮಾಣ, ಚಾಮರಾಜನಗರ ಘಟನೆ ಬಗ್ಗೆ ಮಾಹಿತಿ ಕೋರಿ ಪ್ರಶ್ನೆಗಳನ್ನು ಕೇಳಲಾಗಿತ್ತು. ಆದರೆ ಇದಕ್ಕೆ ಸಮರ್ಪಕವಾಗಿ ಉತ್ತರ ಕೊಟ್ಟಿಲ್ಲ. ಇದರಿಂದ ಎಲ್ಲ ವಿಚಾರವಾಗಿ ಚರ್ಚೆ ನಡೆಸಲು ಸಾಧ್ಯವಾಗಿಲ್ಲ. ಸರ್ಕಾರ ಕೋವಿಡ್ ಮೊದಲನೇ ಅಲೆಯನ್ನು ಸಮರ್ಪಕವಾಗಿ ನಿಭಾಯಿಸಿಲ್ಲ. ಎರಡನೇ ಅಲೆ ಗೊತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಮೂರನೇ ಅಲೆ ಬಗ್ಗೆ ಏನು ಸಿದ್ಧತೆ ಎಂಬ ಬಗ್ಗೆಯೂ ಪ್ರಶ್ನೆ ಕೇಳಿರುವುದಾಗಿ ರಾಮಲಿಂಗರೆಡ್ಡಿ ಮಾಹಿತಿ ನೀಡಿದರು.

ABOUT THE AUTHOR

...view details