ಕರ್ನಾಟಕ

karnataka

ETV Bharat / city

ಅಥಣಿ: ಕೃಷ್ಣಾ ನದಿ ನೀರು ಪಾಲಾಗಿದ್ದ ಮೂವರ ಶವಗಳು ಪತ್ತೆ - Krishna River

ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ ಸಮೀಪ ಕೃಷ್ಣಾ ನದಿ ಪಾಲಾಗಿದ್ದ ಮೂವರು ಸಹೋದರರ ಶವಗಳು ಪತ್ತೆಯಾಗಿವೆ.

Krishna River
ನೀರು ಪಾಲಾಗಿದ್ದ ಮೂವರ ಶವಗಳು ಪತ್ತೆ

By

Published : Jun 30, 2021, 9:14 AM IST

ಅಥಣಿ:ತಾಲೂಕಿನ ಹಲ್ಯಾಳ ಗ್ರಾಮದ ಸಮೀಪ ಕೃಷ್ಣಾ ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ ನಾಲ್ವರು ಸಹೋದರರ ಪೈಕಿ ಮಂಗಳವಾರ ಓರ್ವನ ಶವ ಪತ್ತೆಯಾಗಿತ್ತು. ಇಂದು ಮುಂಜಾನೆ ಮತ್ತೆ ಮೂವರ ಶವಗಳು ದೊರೆತಿವೆ.

ನೀರು ಪಾಲಾಗಿದ್ದ ಮತ್ತೆ ಮೂವರ ಶವಗಳು ಪತ್ತೆ

ಜೂನ್​ 28ರಂದು ಕೃಷ್ಣಾ ನದಿಗೆ ಹಾಸಿಗೆ ಒಗೆಯಲು ಹೋಗಿದ್ದ ನಾಲ್ವರು ಸಹೋದರರು ಕಾಲು ಜಾರಿ ನದಿಗೆ ಬಿದ್ದಿದ್ದರು. ಜೂನ್​​ 29ರಂದು ಪರಶುರಾಮ ಗೋಪಾಲ ಬನಸೋಡೆ (24) ಎಂಬಾತನ ಮೃತದೇಹ ಪತ್ತೆಯಾಗಿತ್ತು. ಇನ್ನುಳಿದ ಮೂವರು ಸಹೋದರರ ಮೃತದೇಹಗಳಿಗಾಗಿ ಎನ್‌ಡಿಆರ್‌ಎಫ್​ ಮತ್ತು ಸ್ಕೂಬಾ ಡೈವಿಂಗ್ ತಂಡ 36 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದರೂ ಶವ ದೊರೆತಿರಲಿಲ್ಲ.

ಆದರೆ, ಇಂದು ನಸುಕಿನ ಜಾವ ಧರೇಪ್ಪ ಗೋಪಾಲ ಬನಸೋಡೆ (29), ಸದಾಶಿವ ಬನಸೋಡೆ (22) ಹಾಗೂ ಶಂಕರ ಗೋಪಾಲ ಬನಸೋಡೆ (20) ಎಂಬುವವರ ಶವಗಳು ನದಿಯಲ್ಲಿ ಸಿಕ್ಕಿತು. ಈ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಅಥಣಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಕೃಷ್ಣಾ ನದಿ ದುರಂತ.. ನೀರು ಪಾಲಾಗಿದ್ದ ನಾಲ್ವರು ಸಹೋದರರ ಪೈಕಿ ಓರ್ವನ ಮೃತದೇಹ ಪತ್ತೆ

ABOUT THE AUTHOR

...view details